Advertisement
ಅಬ್ದುಲ್‌ ರಶೀದ್‌ ಭಾವಾನುವಾದಿಸಿದ ರೈನರ್ ಮರಿಯಾ ರಿಲ್ಕನ ಒಂದು ಕವಿತೆ

ಅಬ್ದುಲ್‌ ರಶೀದ್‌ ಭಾವಾನುವಾದಿಸಿದ ರೈನರ್ ಮರಿಯಾ ರಿಲ್ಕನ ಒಂದು ಕವಿತೆ

ಎಂದೂ ಬಾರದವಳಿಗೆ

ಯಾವತ್ತೂ ನನ್ನ ಬಾಹುಗಳಲ್ಲಿ
ಬಾರದವಳು ನೀನು.
ತೊಡಗುವ ಮೊದಲೇ
ಕಳೆದು ಹೋದವಳು.
ನಿನ್ನ ತಣಿಸುವ ಹಾಡ
ಅರಿಯದವನು ನಾನು.

ನಿಲ್ಲಿಸಿರುವೆ ಕಣ್ಣ ಮುಂದಿನ ಕಡಲ ಮೊರೆತದ ನಡುವೆ
ನಿನ್ನ ಗುರುತು ಹಿಡಿಯಲು ತೊಡಗುವುದನ್ನು
ಎದೆಯೊಳಗಿನ ಅಗಾದ ಆಕಾರಗಳು ರೂಪಗಳು
ತೀರದ ದೂರದ ಕಾಡುವ ನೆಲ,
ನಗರಗಳು, ಗೋಪುರಗಳು, ಸೇತುವೆಗಳು, ತಟ್ಟೆಂದು
ಎದುರಾಗುತ್ತಿದ್ದ ಹಾದಿಯ ತಿರುವುಗಳು,
ಒಂದು ಕಾಲದಲ್ಲಿ ದೇವಾನುದೇವತೆಗಳ ಸಪ್ಪಳದ
ನಡುವೆಯೂ ಮಿನುಗುತ್ತಿದ್ದ ದೂರದ ಭುವಿಯಂತಹವಳು.
ಉಮ್ಮಳಿಸುತ್ತಿವೆ ಈ ಎಲ್ಲವು ಒಳಗೊಳಗೆ ನಿನ್ನ ಒಳಗಿನವು ಅರಿವಾಗದೆ
ಎಂದಿಗೂ ಎಟುಕದವಳು ನೀನು.

ನಾ ಯಾವತ್ತೂ ಹಂಬಲಿಸುತ್ತ ನಿರುಕಿಸುತ್ತಿದ್ದ
ಹೂದೋಟ ನೀನು ಮಾತ್ರ .
ಊರ ಮನೆಯ ತೆರೆದಿದ್ದ ಕಿಟಕಿ
ನೀ ಹೊರಟು ನಿಂತಿದ್ದೆ ನನ್ನ ಕಾಣಲು
ದುಗುಡ ತುಂಬಿ ಬಹುತೇಕ.
ನಾನೂ ಕಂಡೆ ಆಕಸ್ಮಿಕದ ಹಾದಿಗಳಲ್ಲಿ
ನೀ ನಡೆದು ಮರೆಯಾಗುತ್ತಿದ್ದೆ.
ಒಮ್ಮೊಮ್ಮೆ ಅಂಗಡಿಯ ಕನ್ನಡಿಯಲ್ಲಿ ಅದಾಗತಾನೇ
ಹಾದು ಹೋಗಿದ್ದ ನಿನ್ನ ಮಸುಕು ರೂಪ ಕಾಣುತ್ತಿತ್ತು
ಅದಾಗ ತಾನೇ ನಾನೂ ಅದರಲ್ಲಿ ಅಲ್ಲೇ ಕಾಣುತ್ತಿದ್ದೆ.
ಯಾರಿಗೆ ಗೊತ್ತು? ಅದೇ ಹಕ್ಕಿ ನಮ್ಮಿಬ್ಬರಲ್ಲೂ ಕುಹುಗುಟ್ಟಿರಬಹುದು
ಅದೇ ಸಂಜೆಯ ಹೊತ್ತು ದೂರದಲ್ಲಿ ಬೇರೆಯಾಗಿ

ಮೂಲ ರಿಲ್ಕ್ ಕವಿತೆ: You Who Never Arrived
ಭಾವಾನುವಾದ: ಅಬ್ದುಲ್ ರಶೀದ್

About The Author

ಅಬ್ದುಲ್ ರಶೀದ್

ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ