Advertisement
ಡಾ. ಪ್ರೀತಿ ಕೆ.ಎ. ಬರೆದ ಹೊಸ ಕವಿತೆ

ಡಾ. ಪ್ರೀತಿ ಕೆ.ಎ. ಬರೆದ ಹೊಸ ಕವಿತೆ

ನಾವಿಬ್ಬರೂ ಸಂಧಿಸದಿರುತ್ತಿದ್ದರೆ….

ನಾವಿಬ್ಬರೂ ಸಂಧಿಸದಿರುತ್ತಿದ್ದರೆ
ಕನಸಿನ ತತ್ತಿಗೆ ಕಾವು ಕೊಟ್ಟು
ರೆಕ್ಕೆ ಪುಕ್ಕ ಬಂದು
ಹಾರುತ್ತಿರಲಿಲ್ಲ

ಮನದ ಅಂಗಳಕ್ಕೆ ಹೇಳದೇ ಕೇಳದೇ
ಲಗ್ಗೆ ಇಟ್ಟು ನಗುತ್ತಿರಲಿಲ್ಲ

ನಾವಿಬ್ಬರೂ ಸಂಧಿಸದಿರುತ್ತಿದ್ದರೆ
ಸುಖದ ಕಲ್ಪನೆಯೂ
ಇಷ್ಟೊಂದು ಹಿರಿದು
ಹಿಗ್ಗಾಗುತ್ತಿರಲಿಲ್ಲ

ಬಂಗಾರದ ಬಟ್ಟಲಲ್ಲಿ ಅಮೃತ
ಉಣ್ಣುವ ರಸಗಳಿಗೆಗಳಿಗೆ ಸಾಕ್ಷಿಯಾಗುತ್ತಿರಲಿಲ್ಲ

ನಾವಿಬ್ಬರೂ ಸಂಧಿಸದಿರುತ್ತಿದ್ದರೆ
ಅವಡುಗಚ್ಚಿ ವಿದಾಯ ಹೇಳುವ ದುಃಖವಿರುತ್ತಿರಲಿಲ್ಲ
ವಿರಹದ ಬೇಗುದಿಯೊಂದು
ಒಳಗೊಳಗೇ ಸುಡುತ್ತಿರಲಿಲ್ಲ

ನಮ್ಮೊಳಗುಗಳು ಬರಿದಾಗಿ
ನಿಡುಸುಯ್ಯುವ ಪ್ರಮೇಯವಿರುತ್ತಿರಲಿಲ್ಲ

ನಾವಿಬ್ಬರು ಸಂಧಿಸದಿರುತ್ತಿದ್ದರೇ
ಚೆನ್ನಿತ್ತೋ ಏನೋ
ಕೊನೇ ಪಕ್ಷ ನಾನು ನಾನಾಗಿಯೂ
ನೀನು ನೀನಾಗಿಯೂ ಉಳಿದುಬಿಡಬಹುದಿತ್ತು!

 

ಡಾ. ಪ್ರೀತಿ ಕೆ. ಎ. ಬೆಂಗಳೂರಿನವರು
ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪದವೀಧರೆ.
ಕರ್ನಾಟಕ ಆರ್ಥಿಕತೆಯ ಬಗ್ಗೆ ಪುಸ್ತಕ ಹಾಗೂ ಹಲವಾರು ಸಂಶೋಧನಾ ಪ್ರಬಂಧಗಳು ಪ್ರಕಟಗೊಂಡಿವೆ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

3 Comments

  1. Dulcin Sequeira

    Sogasagide. Arthagarbitha kavana.
    Shubashayagalu

    Reply
  2. Achutha.

    Super kavithe.Thumba chennagide.Devaru Ede reethi ollolleya kavithe hagu kathegalannu,bareyuva Shakthi needali.Wishing you all the best and good luck.

    Reply
  3. Maithri

    Nice

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ