Advertisement
ಸುಮಾ ಕಂಚೀಪಾಲ್ ಬರೆದ ಈ ದಿನದ ಕವಿತೆ: ದೇವರು ತೃಪ್ತನಾಗಿರಬಹುದು

ಸುಮಾ ಕಂಚೀಪಾಲ್ ಬರೆದ ಈ ದಿನದ ಕವಿತೆ: ದೇವರು ತೃಪ್ತನಾಗಿರಬಹುದು

ದೇವರು ತೃಪ್ತನಾಗಿರಬಹುದು

ಇರುಳು ಹರಿದು
ಹಗಲು ಬರುವ ಹೊತ್ತಿಗೆ
ಇಬ್ಬನಿಯ ಮೃದು ಬಿಂದುಗಳ
ಸಿಂಚನದ ಬಣ್ಣ ಬಣ್ಣದ ಹೂವುಗಳ
ಅಜ್ಜ ಕೀಳುತ್ತಾನೆ.

ಕೈನಡುಗುವ ಬೆಳಗಿನ ಚಳಿಯಲ್ಲಿ
ಹೂವಿನಪಕಳೆ ಹರಿಯುತ್ತದೆ.
ಅಬ್ಬಿ ಒಲೆಗೆ ಕೈ ಒಡ್ಡಿಕೂರುತ್ತಾನೆ.
ಬೆಚ್ಚಗೆ ಹೊಗೆಯಾಡುವ ಅಬ್ಬಿಯಲ್ಲಿ
ಮಿಂದು,
ದೇವರ ನಾಮದೊಂದಿಗೆ ಮಡಿ ಉಡುತ್ತಾನೆ.

ಬೊಡ್ಡೆ ತುಂಬ ಮಡಿನೀರು,
ತಳೆದ ಗಂಧ
ದೇವರ ನಂದಾ ದೀಪ
ಆರತಿ ಗಂಧದ ಕಡ್ಡಿ, ಗಂಟೆಗಳ ನಾದ.

ಎಂದಿನಂತೆ ಇಂದಿಗೂ ಹೊರಜಗುಲಿಗೆ
ಕೂತು ಭಗವದ್ಗೀತೆ ಓದುತ್ತಾನೆ
ಅಜ್ಜನೂ,
ದೇವರು ತೃಪ್ತನಾಗಿರಬಹುದು.!

 

ಸುಮಾ ಕಂಚೀಪಾಲ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನವರು
ಎಸ್ . ಡಿ. ಎಂ ಉಜಿರೆ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿನಿ
ಕತೆ, ಕವನ ರಚನೆ ಇವರ ಹವ್ಯಾಸ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ