Advertisement
ಆನಂದ ಆರ್ಯ ಅನುವಾದಿಸಿದ ಮಾಯಾ ಏಂಜಲೋ ಕವಿತೆ

ಆನಂದ ಆರ್ಯ ಅನುವಾದಿಸಿದ ಮಾಯಾ ಏಂಜಲೋ ಕವಿತೆ

ಈಗಲೂ ನಾ ಏಳಬಲ್ಲೆ (Still I rise)

ತಿರುಚಿದ ಕಹಿಸುಳ್ಳುಗಳಿಂದ
ಹೆಣೆಯಬಹುದು ನೀನು ಗತವ ನನ್ನ ತುಚ್ಛೀಕರಿಸಿ
ನಡೆಸಬಹುದು ನೀನು ಕೊಳಚೆಯಲಿ ಸಲೀಸಾಗಿ
ಆದರೂ ಏಳಬಲ್ಲೆ ಧೂಳಕಣಗಳಂತೆ ಈಗಲೂ

ನನ್ನ ಜೀವಚೈತನ್ಯದಿಂದ ನೀ ವಿಚಲಿತಗೊಂಡು
ಮಬ್ಬಲಿ ಶರಣಾಗಿರಲು ವೈಯ್ಯಾರದಿ ನಡೆಯುವೆ
ನನ್ನ ಕೋಣೆಯಲಿ ಚಿಮ್ಮುವ ಕೊಳವೆಬಾವಿಯೆ ದೊರೆತಂತೆ

ನಿಶ್ಚಿತ ಅಲೆಗಳಲು ಮೂಡುವ ರವಿ-ಚಂದ್ರರಂತೆ
ಆಕಾಂಕ್ಷೆಗಳು ಉನ್ನತಿಗೇರುವಂತೆ ಈಗಲೂ ನಾ ಏಳಬಲ್ಲೆ

ಬಾಗಿದ ತಲೆ, ನೆಲಕ್ಕೆ ಬೇರೂರಿರುವ ನೋಟ
ಕಣ್ಣಹನಿ ಜಾರುವ ಹಾಗೆ ಜೋತಭುಜ
ಅಂತರಾಳದ ಆಕ್ರಂದನದಿಂದ ಘಾಸಿಗೊಂಡ ನನ್ನ
ಛಿದ್ರವಾಗಿಯೇ ನೀ ನೋಡಬಯಸುವೆ ಅಲ್ಲವೆ

ನನ್ನ ಹಿರಿಮೆಯಿಂದಾದ ಮುಜುಗರವ ನೀ ಅರಗಿಸಿಕೊಳ್ಳದಿರಲು
ನಗಾಡುವೆ ಹಿತ್ತಲಲಿ ಅಗೆದ ಚಿನ್ನದಗಣಿಯೆ ದೊರೆತಿರುವಂತೆ

ಮಾತುಗಳಿಂದಲೆ ನನಗೆ ಗುರಿಹಿಡಬಲ್ಲೆ
ತೀಕ್ಷ್ಣನೋಟದಲೆ ತುಣುಕಾಗಿಸಬಲ್ಲೆ
ಹಗೆಯಲೆ ಕೊಲ್ಲಬಲ್ಲೆ ನನ್ನ
ಆದರೆ ಗಾಳಿಯಂತೆ ಪಾರಾಗಿ ಮೇಲೇಳುವೆ ನಾನು

ನನ್ನ ಶೃಂಗಾರವು ನಿನ್ನ ಅಚ್ಚರಿಯಲಿ ಬುಡಮೇಲುಮಾಡಿರಲು
ಕುಣಿದಾಡುವೆ ತೊಡೆಸಂದುವಿನಲಿ ವಜ್ರಗಳೆ ದೊರೆತಂತೆ

ಐತಿಹ್ಯದ ಲಜ್ಜೆಗುಡಿಸಲುಗಳಿಂದ ಮೇಲೇಳುವೆ
ನೋವಿನಲೆ ಅದ್ದಿದ ಗತದಿಂದ ಮೇಲೇಳುವೆ

ಉಬ್ಬರವಿಳಿತದಿ ಜೊತೆಯಾಗೆ ಉಳಿದು
ಕುಪ್ಪಳಿಸುವ ವಿಶಾಲವಾದ ಕಪ್ಪುಸಮುದ್ರ ನಾನು
ಭಯಂಕರ ರಾತ್ರಿಗಳ ಹಿಂದೆತಳ್ಳಿ
ಸೋಜುಗದ ನಡುದಿನದಲಿ ಮೇಲೇಳುವೆ
ನನ್ನ ಪೂರ್ವಿಕರಿತ್ತ ಉಡುಗೊರೆಗಳ ತಂದು
ದಾಸ್ಯತ್ವದ ನಂಬುಗೆಯಾಗಿ ಮೇಲೇಳುವೆ
ಮೇಲೇಳುವೆ

ಆನಂದ ಆರ್ಯ ಮೂಲತಃ ಕೊಪ್ಪಳದವರು.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದಾರೆ.
ಓದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

6 Comments

  1. Anandkumar

    ಒಳ್ಳೆಯ ಪ್ರಯತ್ನ, ನಿಮ್ಮಿಂದ ಇನ್ನೂ ಮೂಡಿ ಬರಲಿ ಹಾರೈಸುವೆ

    Reply
  2. Nora

    ತುಂಬಾ ಅರ್ಥಪೂರ್ಣ ಅನುವಾದ..

    Reply
  3. ನೂರುಲ್ಲಾ ತ್ಯಾಮಗೊಂಡ್ಲು

    ತುಂಬ ಚೆನ್ನಾಗಿದೆ ಅನುವಾದ…

    Reply
    • Anand Arya

      Thank you

      Reply
  4. Archanashree l

    Excellent.

    Reply
    • Anand Arya

      Thank you

      Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ