Advertisement
ಅಭಿಷೇಕ ಬಳೆ ಮಸರಕಲ್ ಬರೆದ ಗಝಲ್

ಅಭಿಷೇಕ ಬಳೆ ಮಸರಕಲ್ ಬರೆದ ಗಝಲ್

ಒಂದೊಮ್ಮೆ ಬಂದು ಮುಖ ತೋರಿಸು ಕನ್ನಡಿ ನಕ್ಕು ಬಿಡುತ್ತದೆ
ಜೊತೆಯಿರು ಸದಾ ಬದುಕು ತಾನೇ ಮುನ್ನುಡಿ ಬರೆದುಕೊಳ್ಳುತ್ತದೆ

ರಾತ್ರಿಯಲಿ ಕನಸಿಗೆ ಬಾರದಿದ್ದರೆ ಮುಂಜಾವು ಸತ್ತು ಹೋಗುತ್ತದೆ
ವಿಸ್ತಾರ ಬದಲಿಸದಿರು ವಿರಹ ಒಂಟಿಯಾಗಿ ಬಿಕ್ಕುತ್ತದೆ

ಆಗಾಗ್ಗೆ ಎದುರು ಬರುತಿರು ಹೃದಯ ಹಿಗ್ಗಿ ಕುಣಿಯುತ್ತದೆ
ಮಾತು ಮಾತಿಗೆ ಬಿಂಕ ತೋರದಿರು ಮೌನ ಹೆಪ್ಪುಗಟ್ಟುತ್ತದೆ

ಬಣ್ಣ ಬಣ್ಣದ ನೋಟ ಬದುಕಿನ ಸುತ್ತ ಸದಾ ಸುಳಿಯುತ್ತದೆ
ನೋಟ ನೋಟಕ್ಕು ರೆಪ್ಪೆ ತಾಕಿಸು ಮನದ ಏಕತಾರಿ ಮೀಟುತ್ತದೆ

ಎದೆಯಾಳಕ್ಕೆ ಇಳಿ ಅಭಿಯ ಹೃದಯದ ನೋವು ಅರಿವಾಗುತ್ತದೆ
ನೋವುಂಡ ಹೃದಯದಲ್ಲಿ ಅಲ್ಲವೆ ಸದಾ ಪ್ರೀತಿ ಹುಟ್ಟುತ್ತದೆ

ಅಭಿಷೇಕ್ ಬಳೆ ರಾಯಚೂರು ಜಿಲ್ಲೆಯ ಮಸರಕಲ್ ಊರಿನವರು.
ಬಿ.ಎಸ್ಸಿ, ಬಿ.ಎಡ್ ವ್ಯಾಸಂಗ ಮಾಡಿದ್ದಾರೆ
ಓದು ಮತ್ತು ಕವಿತೆ ರಚನೆ ಇವರ ಹವ್ಯಾಸಗಳು

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ