Advertisement
ರೇಶ್ಮಾ ಗುಳೇದಗುಡ್ಡಾಕರ್ ಬರೆದ ಈ ದಿನದ ಕವಿತೆ

ರೇಶ್ಮಾ ಗುಳೇದಗುಡ್ಡಾಕರ್ ಬರೆದ ಈ ದಿನದ ಕವಿತೆ

ಬಯಲ ಬದುಕು ….

ಹಚ್ಚಲು ದೀಪವಿಲ್ಲ
ಹೊದ್ದು ಮಲಗಲು ಹಚ್ಚಡವಿಲ್ಲ
ನೆಲದ ಬುತ್ತಿ ಉಂಡು
ಮೈಯ ಉಸಿರ ಬಸಿದು
ದಣಿವರಿದು ಮರೆವ ಎಲ್ಲ
ಇಹ ಪರದ ನಾಕವ

ಊರು ಯಾವುದಾದರೇನು ?
ದಾರಿ ಹೇಗಿದ್ದರೇನು?
ಅಂಜು -ಅಳುಕಿಗೆ
ಇಲ್ಲಿ ತಾವಿಲ್ಲಾ ….

ಒಲೆ ಉರಿದಷ್ಟೇ ತಾಪ
ಬದುಕಿಗೂ ಇದ್ದರು
ಕ್ಷೀಣಿಸದ ಭರವಸೆ ಚಿಂತೆಗಳಿಗೆ ಇಲ್ಲಿ
ಜಾಗವಿಲ್ಲ ಹೋಗುವ ಹಾದಿಗೆ
ಜೊತೆಯಿಲ್ಲ…..

ಹಸಿದು ಉಣ್ಣುವದು ಗೊತ್ತು
ಬಯಲ ರುಚಿಗೆ ಸಮಯಾವುದಿತ್ತು ?
ಬಟ್ಟೆ ಹರಿದರು ಹೃದಯ ಒಡೆದಿಲ್ಲ
ಯಾಕೆಂದರೆ ಅದು
ನಂಜಿನ ತಾಣವಲ್ಲ ….

ಬಯಲ ಬಾಳಿಗೆ
ಒಲುಮೆ ಜೋಳಿಗೆ
ಹರಿಯುತಿಹುದು ಜೀವನ
ಪಾತ್ರಗಳ ಬದಲಿಸುತ ನಿಂತ
ನೀರಾಗದೆ ನಿರಾಳವಾಗಿ …..

ರೇಶ್ಮಾಗುಳೇದಗುಡ್ಡಾಕರ್ ಬಳ್ಳಾರಿ ಜಿಲ್ಲೆಯ, ಕೊಟ್ಟೂರು ಪಟ್ಟಣದವರು 
ಓದುವುದು ಇವರ ಹವ್ಯಾಸ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ