Advertisement
ಕಾವ್ಯಮಾಲೆಯ ಕಾವ್ಯಕುಸುಮ: ಬಯಕೆ

ಕಾವ್ಯಮಾಲೆಯ ಕಾವ್ಯಕುಸುಮ: ಬಯಕೆ

ಕನ್ನಡ ಮತ್ತು ಮರಾಠಿ ಭಾಷೆಯಲ್ಲಿ ಬರೆದ ಜಯದೇವಿ ತಾಯಿ ಲಿಗಾಡೆ ಅವರು ಸೊಲ್ಲಾಪುರದಲ್ಲಿ ಹುಟ್ಟಿದರು.  ಕರ್ನಾಟಕದ  ಏಕೀಕರಣಕ್ಕಾಗಿ ಹೋರಾಡಿದವರು. ಅಧ್ಯಾತ್ಮದತ್ತ ಹೆಚ್ಚು ಒಲವಿದ್ದುದರಿಂದ ಅದೇ ಮಾದರಿ ಸಾಹಿತ್ಯ ಕೃತಿಗಳನ್ನು ರಚಿಸಿದರು. ಸ್ತ್ರೀ ಶಿಕ್ಷಣದ ಕುರಿತು ಜಯದೇವಿ ತಾಯಿಯವರು ಅಪಾರ ಆಸಕ್ತಿ ಕಾಳಜಿ ಹೊಂದಿದ್ದರು. ಸಮಾಜ ಸೇವಕಿಯಾಗಿ, ಶಿಕ್ಷಕಿಯಾಗಿ, ಉತ್ತಮ ವಾಗ್ಮಿಯಾಗಿ ಗುರುತಿಸಿಕೊಂಡಿದ್ದರು.  ಜಯಗೀತೆ, ತಾಯಿಯ ಪದಗಳು, ಶ್ರೀ ಸಿದ್ಧರಾಮ ಪುರಾಣ,ತಾರಕ ತಂಬೂರಿ, ಬಂದೇವು ಕಲ್ಯಾಣಕೆ, ಸಾವಿರದ ಪದಗಳು, ಅರುವಿನಾಗರದಲ್ಲಿ ಅವರ ಪ್ರಮುಖ ಕನ್ನಡ ಕೃತಿಗಳು. ಮರಾಠಿಯಲ್ಲಿಯೂ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರು ಬರೆದ ‘ಬಯಕೆ’ ಕವನವನ್ನು ‘ಸುವರ್ಣ ಸಂಪುಟ’ದಿಂದ ಆಯ್ದುಕೊಂಡಿದ್ದು, ಕನ್ನಡ ಕಾವ್ಯಮಾಲೆಯ ಕಾಣದ ಕುಸುಮಗಳು ಸರಣಿಯಲ್ಲಿ ಇಂದಿನ ಓದಿಗಾಗಿ.

 

ಬಯಕೆ
ಸೊನ್ನಲಿಗೆಯ ಸಿದ್ಧನ
ಕಲ್ಯಾಣ ಬಸವನ
ಶೃಂಗೇರಿ ಶಂಕರನ
ಬುದ್ಧ ಮಹಾವೀರರ
ಬರುವಿಕೆ ಬಯಕೆಯನು
ಬಯಸೇನ, ಬಯಕೆಯನು ಬದುಕುದಕೆ.

ಬರುವಿರಿ ಇನ್ನೊಮ್ಮೆ
ಎಂಬುತ ನಂಬುತ
ದೂಡುವೆ ದೋಣಿಯ
ತೆರೆಯೇನ ?ಬಂಡೇನ ?
ತಡೆಯದು ನನ್ನೇನು
ತಡೆಯೇನು ? ಬಾಳುವೆ ಕಡಲಾಗ-

ನೂಕುವೆ ನೌಕೆಯ
ಬೇಕೇನ ನನಗೇನ
ಕೂಡುವೆ ನಿಮ್ಮನ್ನ
ಅಂಜೇನು ಸಾವೀಗು
ಸಾವೇನು ನಿಮ್ಮ ಉಡಿಯೇನು ?
ಸಾವೇನ ಬೇರೇನ ? ಸಾವೇನ ನನ್ನ ತವರೇನ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ