Advertisement
ಕೀರ್ತಿ ಎಸ್.‌ ಬೈಂದೂರು ಬರೆದ ಈ ದಿನದ ಕವಿತೆ

ಕೀರ್ತಿ ಎಸ್.‌ ಬೈಂದೂರು ಬರೆದ ಈ ದಿನದ ಕವಿತೆ

ಅವಳ ಬೇಡಿಕೆ

‘ಇವತ್ತೇನು ಮಾಡುವೇ?’
ನೀರು ಬಿಡದ ಬಟ್ಟೆಯ
ಚುಡಾಯಿಸುವ ನೋಟ!

ಗಂಟು ಬಿಚ್ಚಿದರೆ,
ತಿಳಿ ಬಣ್ಣದ ಬಿಳಿಯುಡುಪು
ಮೈಯಿಗೆ ಒತ್ತಿ ಕೂತ,
ಬದುಕಿಸುವ ‘ಉಸಿರು’
ಶಾಲನ್ನು ಕುರ್ಚಿಗೆ ಹೊದೆಸಿ
ಬುತ್ತಿ ಕಟ್ಟಿ ಹೊರಟಳವಳು

ಬಗಲಲಿ ಜೋತ ವೆನಿಟಿ ಬ್ಯಾಗು,
ಹೊಸ ಸ್ಟೈಲಿನಿಂದ ಕುಳ್ಳಗಾದ ಜುಟ್ಟು,
ಒಳ ತೊಡುಗೆ ಎಳೆದ ರೇಖೆಗಳ
ಮುಚ್ಚುವುದಿರಲಿ, ಮರೆಮಾಚದೂ..
ಮರೆತಿದ್ದ ಶಾಲಿಗಾಗಿ ಬೇಡಿಕೆ!
ಅವಳ ಒಳತೊಡುಗೆಯ ಬ್ರಾಂಡ್‌ಅನ್ನು
ಪ್ರಪಂಚವೇ ಕೂಗಿ ಹೇಳುತ್ತದಾದರೂ
ಕಾಣುವ ಕಣ್ಣುಗಳಿಂದಲೆ ಅರಿವು ಸಿದ್ಧಿ!

ವೇಗದ ನಡಿಗೆಯಲ್ಲೇ
ಪ್ರಾರ್ಥನೆಯಿಡುತ್ತಾಳೆ ಆಕೆ,
ಮಳೆಯ ತಡೆಗಾಗಿಯಂತೂ ಅಲ್ಲ!
ತೊಯ್ದ ದೇಹದ ಒಳ ನೋವನೆಲ್ಲ
ತಿಳಿಯಾಗಿ ಜಗತ್ತೂ ಕಾಣಲೆಂದು

ಗಾಢ ದೇಹದಲಿ ಅಳಿಸಲಾಗದ ಸಾವಿರ ಕಲೆಗಳಿವೆ!

ಕೀರ್ತಿ ಮೂಲತಃ ಉಡುಪಿಯ ಬೈಂದೂರಿನವರು.
ಸದ್ಯ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಪೂರೈಸಿದ್ದಾರೆ.
ಕವನ, ಲೇಖನಗಳನ್ನು ಬರೆಯುವುದು ಇವರ ಹವ್ಯಾಸ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ