Advertisement
ನೂರುಲ್ಲಾ ತ್ಯಾಮಗೊಂಡ್ಲು ಬರೆದ ಈ ದಿನದ ಕವಿತೆ

ನೂರುಲ್ಲಾ ತ್ಯಾಮಗೊಂಡ್ಲು ಬರೆದ ಈ ದಿನದ ಕವಿತೆ

ಪ್ರೀತಿ ಮತ್ತು ಪ್ರಶ್ನೆ

1

ಆ ಚಲಿಸುವ ಗಾಳಿಯನು ತಡೆದು
ಅದರ ರೆಕ್ಕೆಗಳಿಗೆ ನಮ್ಮ ಹೃದಯದ
ಪ್ರೀತಿಯ ಪತಂಗಗಳನ್ನು ಕಟ್ಟಿ
ನಮ್ಮಿಂದ ಅಗಲಿ ಹೋದವರ ಊರಿ(ದೇಶ)ಗೆ ಕಳುಹಿಸುವೆ
ಮತ್ತೆ ಹೇಳುವೆ ಗಾಳಿಗೆ
ಅಲ್ಲಿಂದ ಅವರ ಹೃದಯಗಳಿಂದಲೂ
ಪ್ರೀತಿಯ ಅಪ್ಪುಗೆ ಹೊತ್ತು ತಾ ಎಂದು

2

ಈಗ..
ಸರಹದ್ದುಗಳ ಗೋಡೆಗಳನ್ನು
ಕೆಡವಿ, ಬಾಚಿ
ಒಂದು ಹೊಸದಾದ ಸ್ತಂಭವನ್ನು ಕಟ್ಟುವೆ
ಬಹುಶಃ ಆಕಾಶಕ್ಕೆ ಮುಟ್ಟುವ ಹಾಗೆ

ನಮ್ಮ ಸುತ್ತಲು ಹಬ್ಬಿಕೊಂಡಿರುವ
ಕತ್ತಲನ್ನು ಮುಷ್ಟಿಯಲಿ ಅದುಮಿ, ಹಿಡಿದು
ಹೊಸದೊಂದು ದೀಪ ಮುಡಿಸಿ
ಆ ಬೃಹದಾದ ಸ್ತಂಭದ ಮೇಲಿಟ್ಟು
ಮತ್ತೆ
ಹಗಲಲಿ ಸೂರ್ಯನ ಬೆಳಕನ್ನು ಕಿತ್ತು
ಇರುಳಲಿ ಚಂದ್ರ ತಾರೆಯರ ಜೋತ್ಸ್ನೆ ಕಿತ್ತು
ಅದರಲಿ ತುಂಬುವೆ
ನಮ್ಮ ನಮ್ಮ ನಡುವೆ ಎಂದೂ
ಕತ್ತಲು ಬಾರದಂತೆ

3

ಈ ಮಣ್ಣಿನಲಿ ಮೊಳೆಯುವ
ಬೀಜಗಳು ಈಗಲೂ ಕೇಳುತ್ತವೆ
ಆ ಎಲ್ಲಿ, ಮತ್ತೊಬ್ಬ ಜೊತೆಗಾರ
ನಾನು ಅನಾದಿಯಿಂದಲೂ
ಒಡೆದ ಎರಡು ಕಾಳಿನ ಭಾಗವೇ ಆಗಿರುವೆ
ಸೌಹಾರ್ದದ ಉಣಿಸಿಗೆ
ಒಂದು ಕಾಳನ್ನು ಉಳಿಸಿ ಏನು ಮಾಡುವೆ?
ನೀನೇನು ದಾಯದಿಯಾಗಿಲ್ಲ ತಾನೇ?

ನೂರುಲ್ಲಾ ತ್ಯಾಮಗೊಂಡ್ಲು ಬೆಂಗಳೂರು ಗ್ರಾಮೀಣ ಜಿಲ್ಲೆ ತ್ಯಾಮಗೊಂಡ್ಲುವಿನವರು
ನ್ಯಾಯಾಂಗ ಇಲಾಖೆಯಲ್ಲಿ ಸೇವೆಸಲ್ಲಿಸುತ್ತಿದ್ದಾರೆ
“ಬೆಳಕಿನ ಬುಗ್ಗೆ” ಮತ್ತು “ನನ್ನಪ್ಪ ಒಂದು ಗ್ಯಾಲಕ್ಸಿ” ಇವರ ಪ್ರಕಟಿತ ಕವನ ಸಂಕಲನಗಳು.
ಕವಿತೆ, ಕಥೆ, ವಿಮರ್ಶೆಯಲ್ಲಿ ಆಸಕ್ತಿ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ