Advertisement
ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

ಹುಡುಕಾಟ

ಅವನು ಸುಖವನ್ನರಸಿ ಬಂದಿದ್ದ
ಮನೆ ಕುಟುಂಬ ಕರುಳಬಳ್ಳಿ
ಬೆರಳುಂಗುರದ ಪ್ರೀತಿ
ಭೂಮಿತೂಕದ ಸಂಪತ್ತು
ಎಲ್ಲವನ್ನೂ ತೊರೆದು ಬಂದಿದ್ದ

ಸುಖವನ್ನು ಬಯಸಿ ಅವನು
ಅಡಿಯಿಡದ ಸ್ಥಳವೇ ಇರಲಿಲ್ಲ
ಅನೂಹ್ಯ ಕ್ಷಿತಿಜವನು ಕಣ್ಣಂಚಲ್ಲಿ
ಸ್ಪರ್ಶಿಸಿ ಬಂದಿದ್ದ
ಅನ್ಯಗ್ರಹದ ಪರಿಧಿಯಾಚೆಗೂ
ತಲೆಹಾಕಿ ತಿರುಗಿದ್ದ
ಗೋಷ್ಠಿ ಗಾಯನ ನೃತ್ಯ ಸಮ್ಮಿಲನ
ಬಾರು ಕ್ಲಬ್ಬು ಮಬ್ಬು ಸೂಳೆಗೇರಿ
ಕೊನೆಯಿರದ ಕಡಲು
ಚಣಕ್ಕೊಮ್ಮೆ ಹೊಸದಾಗುವ ಉಡುಪು
ಹಿಮಾಲಯದ ತುತ್ತತುದಿ
ಬುವಿಯಾಳದ ನೀರಸೆಲೆ
ಅರೆನಿಮಿಷಕ್ಕೊಮ್ಮೆ ಜಿಗಿಜಿಗಿಯುವ
ಎದೆಯಾಳದ ಕನವರಿಕೆಗಳು
ಮುಂಜಾನೆ ಬಿದ್ದ ಕನಸು
ಯಾವುದೂ ಖುಷಿ ಕೊಡಲೇ ಇಲ್ಲ

ಅತಿ ಅತೃಪ್ತ ಆತ್ಮನಾಗಿ
ಹೊಸ ಊರಿಗೆ ಬಂದವನಿಗೆ
ಕಟ್ಟಡವೊಂದರ ಮುಂದೆ ಕಂಡದ್ದು
ಅದೊಂದು ಫಲಕ-
‘ಇಲ್ಲಿ ಸುಖ ಸಿಗುತ್ತದೆ’

ದುಮ್ಮನೆ ಬಾಗಿಲನ್ನು ದೂಡಿಕೊಂಡು
ಒಳಹೋದವನು ಎದುರಾದ
ಇನ್ನೊಂದು ಫಲಕಕ್ಕೆ-
‘ದಯವಿಟ್ಟು ಮೆದುಳನ್ನು
ಕಳಚಿಟ್ಟು ಒಳಬನ್ನಿ’

About The Author

ಡಾ. ವಿಶ್ವನಾಥ ಎನ್ ನೇರಳಕಟ್ಟೆ

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ),  ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. "ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ" ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ