Advertisement
ಕಣ್ಣಿಗಿಲ್ಲದ ಕಾಣ್ಕೆ: ಕಮಲಾಕರ ಭಟ್ ಕಡವೆ ಬರೆದ ದಿನದ ಕವಿತೆ

ಕಣ್ಣಿಗಿಲ್ಲದ ಕಾಣ್ಕೆ: ಕಮಲಾಕರ ಭಟ್ ಕಡವೆ ಬರೆದ ದಿನದ ಕವಿತೆ

ಕಣ್ಣಿಗಿಲ್ಲದ ಕಾಣ್ಕೆ

ಹಸಿರು ಬಟ್ಟೆಯ ಈ ಮಗುವಿನ ತುಟಿಯಿಂದ ತೊಟ್ಟಿಕ್ಕುವ
ಬಯಕೆಯ ಅತೀವ ಗಂಭೀರ ಮಂದತೇವ
ನೆನಪಿಗೇ ಬಾರದ ಈಜುಗೊಳದೊಳಗೆ ತೊಟ್ಟಿಕ್ಕುವ
ಜೀವಹನಿಯಲ್ಲಿ ತೇಲುವ ಕನಸು
ಹುಟ್ಟಲ್ಲೆ ಸೀಳುತಲೆ.
ಹಸಿರು ಬಟ್ಟೆಯ ಈ ಮಗು ಇಲ್ಲಿಲ್ಲ
ಬರಿದೆ ಅದರ ಒಂದು ಛಾಯೆ-ಚಿತ್ರ.
ಜೋರಾಗಿ ಕುಲುಕಿದರೆ ಕಪ್ಪು ಬಿಳುಪು ಚುಕ್ಕೆಗಳು ಉದುರಿ
ಕಣ್ಣಿಗೆ ಮಸಿಹಾಕಬಹುದು.
ಆದರೂ
ಕರುಳಿಂದ ಕಾಣಲಾದೀತೆ? ಕಣ್ಣಲ್ಲೇ ಕಾಣಬೇಕು.
ಒಳಪದರದ ಮೇಲೆ ಬೀಳುವ ಉಲ್ಟಾ ಬಿಂಬವನ್ನು
ಸರಿಮಾಡದಿದ್ದರೆ ಕಾಲುತಲೆಯಾಗಿ
ಪೂರ್ವದಲ್ಲಿಲ್ಲದ ಉತ್ತರ ಪಶ್ಚಿಮವಾಗಿ ಗೋಟಾವಳಿ.

 

 

 

 

ಹಸಿರು ಬಟ್ಟೆಯ ಈ ಮಗು ಇಲ್ಲಿಲ್ಲ
ಸೀಳುಬಿಂಬದ ಎಡಬಲಕ್ಕೆ ಗೋಲ ಗೋಲ ಕಲೆ
ಹೋಗಲೇ ಬೇಕು ಕಲುಷಿತ ಛಾಯೆ
ಇದರಲ್ಲಿ ಇರದ ಭಿನ್ನತೆ ಹುಡುಕುವುದೇ ಸೈ
ಈ ಹಸಿರು ಬಟ್ಟೆಯ ಮಗು ಹುಟ್ಟಿತಾದರೂ ಎಲ್ಲಿ?
ಯಾವ ಹಿಂಸೆಯ ಪ್ರತೀಕ, ಯಾವ ಒಡಕಿನ ಕೂಡುವಳಿ,
ಯಾವ ನಿವೇಶದಲ್ಲಿ ದಯೆಯಿರದ ಸಮಯದ ಹಾವಳಿ ಹೀಗೆ?
ಹಸಿರು ಬಟ್ಟೆಯ ಈ ಮಗು ಇಲ್ಲಿಲ್ಲ
ಬೆರಳಲ್ಲಿ ಬೆಳೆಯುತ್ತಲೇ ಇರುವ ಕಲೆ
ತೊಡೆಯುವುದೆ ಛಾಯೆ?
ತಳೆಯುವುದು ಬಹುರೂಪ, ಭಲೆ, ಭಲೆ,
ಮಹಾನ್ ತಲೆ.
ಏಡಿ ತೆವಳುತ್ತದೆ ಮರಳಗುಂಟ, ಗೀಚಿ ಹದಿನೆರಡು ತಿಂಗಳ ದಿನಚರಿ.
ಹೀಗೆ ಗಾಳಿ ಒಂದು ಟೆಲಿಫೋನು ತಂತಿಗುಂಟ ವಾಲಿವಾಲಿ
ತೀಡಿದಂತೆ ಬರಿಯ ಭಾಸ, ಬರಿದೆ ಕಿನಾರೆಯಲ್ಲಿ ಬೆಂಕಿ,
ಕಣ್ಣಿಗಿಲ್ಲದ ಕಾಣ್ಕೆ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ