Advertisement
ಸುಮಾ ಸತೀಶ್

ಸುಮಾ ಸತೀಶ್‌ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ),  ಮನನ - ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು),  ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು - ಬರೆಹ) ಇವರ ಪ್ರಕಟಿತ ಕೃತಿಗಳು.

ಮಳೆ ನಕ್ಷತ್ರಗಳ ಲೆಕ್ಕಾಚಾರದ ನಡುವೆ

ಹಳ್ಳಿಗರು ನಮಗಿಂತ ಬೆಸ್ಟ್. ಅವರಲ್ಲೂ ನಾಟಕ ಮಾಡುವ ಉಮೇದು ಇದೆ. ಹಾಗೆ ನೋಡಿದರೆ ನಮಗಿಂತ ಹೆಚ್ಚು ಇದೆ. ಆದರೆ ಅವರಿಗೆ ನಾಟಕ ಎನ್ನುವುದು ತಮ್ಮ ಬಿಡುವಿನ ದಿನಗಳ ಒಂದು ದಿವ್ಯ ಬಾಬ್ತು. ಮಳೆಗಾಲ ಆರಂಭವಾಗಿ ಬೇಸಾಯ ಆರಂಭಿಸಿ ಉತ್ತುಬಿತ್ತು ಫಸಲು ಕೈಗೆ ಬರುತ್ತದೆ ಅನಿಸಿದಾಗ ಅವರು ನಾಟಕದ ಪ್ರಾಕ್ಟೀಸ್ ಮಾಡಿ ಬಣ್ಣ ಹಚ್ಚಿ ಸಂಭ್ರಮಿಸುತ್ತಾರೆ.
ಎನ್.ಸಿ. ಮಹೇಶ್ ಬರೆಯುವ ‘ರಂಗ ವಠಾರ’ ಅಂಕಣ

Read More

ಸುಳಿಯ ಸೆಳವಿಗೆ ಸಿಲುಕದೇ…

ಮನುಷ್ಯ ಮುಕ್ತವಾಗಿ ಮತ್ತು ಸ್ವಚ್ಛಂದವಾಗಿ ಬೇರೆಯವರ ಜೊತೆ ಕಲೆಯಲು ರಂಗಭೂಮಿಗೆ ಬರಬೇಕು. ಅಲ್ಲಿ ಇರುವ ಮಜವೇ ಬೇರೆ. ಪ್ರೀತಿಯಲ್ಲಿ, ಸಲಿಗೆಯಲ್ಲಿ ಮತ್ತು ಸ್ನೇಹದಲ್ಲಿ ಕಾಲೆಳೆಯುವ ಬಗೆಗಳು ಇಲ್ಲಿ ಪಡೆದುಕೊಳ್ಳುವ ಆಯಾಮವೇ ಬೇರೆ. ಮೇಕಪ್‍ಗೆ ಕೂತರೆ ಮತ್ತು ರಂಗಕ್ಕೆ ಬಂದರೆ ಅಲ್ಲಿ ಅವರ ಚಹರೆ ಬೇರೆ. ಈ ಎಲ್ಲ ತಿಳಿದು ಮತ್ತು ಸಮುದ್ರದ ಬಗೆಗೆ ನನ್ನಲ್ಲಿ ಮೊದಲಿಂದ ಇರುವ ಸೆಳೆತದಿಂದ ಹೊರಟೆ. ಟಿಟಿಯಲ್ಲಿ ಹುಡುಗರ ಗೇಲಿ. ಪರಸ್ಪರ ಕಾಲೆಳೆಯುವ ಗುಣ ನಗು ತರಿಸುತ್ತಿತ್ತು.
ಎನ್.ಸಿ. ಮಹೇಶ್‌ ಬರೆಯುವ “ರಂಗ ವಠಾರ” ಅಂಕಣ

Read More

ದುಬಾರಿ ಲೋಕದಲ್ಲಿ ರಂಗಪ್ರದರ್ಶನಗಳ ಪೂರ್ವಾಪರ

ಧೈರ್ಯ ಮಾಡಿ ರಂಗಮಂದಿರದ ಬಾಡಿಗೆ ಕಟ್ಟಿ ನಾಟಕ ಮಾಡಲು ಮುಂದಾಗುತ್ತೇವೆ ಅಂತಿಟ್ಟುಕೊಳ್ಳಿ. ಜನ ಬರಬೇಕಲ್ಲ ? ಪೆಟ್ರೋಲ್ ದರ ಯಾವ ಶಿಖರವನ್ನ ಗುರಿಯಾಗಿಟ್ಟುಕೊಂಡಿದೆ ಎನ್ನುವುದು ತಿಳಿಯುತ್ತಿಲ್ಲ. ಅಡುಗೆ ಅನಿಲ ದರ ಕೇಳಿದರೆ ಎದೆ ಸ್ಫೋಟಗೊಳ್ಳುತ್ತದೆ. ಅಡುಗೆಗೆ ಬಳಸುವ ಎಣ್ಣೆ ತನಗೆ ಬೆಲೆ ಬರುತ್ತಿರುವುದಕ್ಕೆ ವ್ಯರ್ಥವಾಗಿ ಹಿಗ್ಗುತ್ತಿದೆ. ನೀವು ರಂಗಮಂದಿರಗಳ ಬಾಡಿಗೆ ದರ ಏರಿಸಿದರೆ ನಾವು ರಂಗತಂಡಗಳವರು ಏನು ಮಾಡಬೇಕು? ಎನ್. ಸಿ. ಮಹೇಶ್.  ಬರಹ

Read More

ನೇಪಥ್ಯದಲ್ಲಿ ಹಾದು ಹೋಗುವ ಆಲೋಚನೆಗಳು

ಆಕೆ ಈ ಹಿಂದೆ ನಮ್ಮ ತಂಡದಲ್ಲಿ ನಟಿಸಿದ್ದ ನಟಿ. ಆಕೆಗೆ ಮೊದಲು ತುಂಬ ನೀಳ ಮತ್ತು ದೃಢವಾದ ಕಾಯ ಇತ್ತು. ನಡುಮಧ್ಯೆ ಕೆಲವು ಷೋಗಳಿಗೆ ಆಕೆ ಗೈರು. ಯಾಕೆ ಎಂದು ವಿಚಾರಿಸಿದಾಗ ಆಕೆ ತಣ್ಣನೆಯ ದನಿಯಲ್ಲಿ ‘ ಸರ್ ನನಗೆ ಕ್ಯಾನ್ಸರ್ ಆಗಿದೆ..ಟ್ರೀಟ್ಮೆಂಟ್ ತಗೋತಿದ್ದೀನಿ.. ಸೊ ಬರಲಿಕ್ಕೆ ಆಗ್ತಿಲ್ಲ..’. ಅಂದರು. ಆ ಹೊತ್ತು ಅದು ನನ್ನಲ್ಲಿ ಗಾಬರಿ ಹುಟ್ಟಿಸಿದ ಉತ್ತರವಾಗಿತ್ತು. ನನ್ನ ದನಿಯಲ್ಲಿದ್ದ ಗಾಬರಿ ಗುರುತಿಸಿ ಆಕೆ ಮತ್ತೆ ‘ ಸರ್ ಅಷ್ಟು ಸೀರಿಯಸ್ ಏನಿಲ್ಲ’ ಎಂದರು. ರಂಗವಠಾರ ಅಂಕಣದಲ್ಲಿ ಎನ್. ಸಿ. ಮಹೇಶ್‍ ಬರಹ  ಇಂದಿನ  ಓದಿಗಾಗಿ.

Read More

ಆತ್ಮಾವಲೋಕನ ಎಂಬುದೊಂದು ಯುದ್ಧ

ಪ್ರಸಿದ್ಧ ರಂಗಶಾಲೆಗಳಲ್ಲಿ ಕಲಿತು ಹೊರಬರುವವರು ಮಿಕ್ಕವರಿಗಿಂತ ಒಂದು ಸ್ತರದ ಮೇಲೆ ಇರುತ್ತಾರೆ. ಯಾಕೆಂದರೆ ಅವರನ್ನು ಹಾಗೆ ತರಬೇತುಗೊಳಿಸಿರಲಾಗುತ್ತದೆ. ಅವರಿಗೆ ರಂಗಪಠ್ಯವನ್ನು ಅಭ್ಯಾಸ ಮಾಡಿಸುವ ಕ್ರಮವೇ ಬೇರೆ. ನಟನೆ ಮತ್ತು ನಟರ ಆಯ್ಕೆ ನಂತರದ ಕೆಲಸ. ಮೊದಲು ರಂಗಪಠ್ಯದ ಸಾರಸರ್ವದ ಬಗ್ಗೆ ಚರ್ಚೆಗಳು ಆರಂಭವಾಗುತ್ತವೆ. ಆ ರಂಗನಾಟಕ ರೂಪಕವಾಗಿ ಅರಳಿಕೊಂಡಿರುವ ಬಗೆಯನ್ನು ಬೆರಗಿನಲ್ಲಿ ಅರ್ಥೈಸಲಾಗುತ್ತದೆ. ನಂತರ ಪ್ರತಿಯೊಂದು ಪಾತ್ರ, ಅದರ ಅನನ್ಯತೆಯನ್ನು ವಿವರಿಸಲಾಗುತ್ತದೆ. ಚಿಕ್ಕ ಪಾತ್ರ ದೊಡ್ಡ ಪಾತ್ರದ ವರ್ಗೀಕರಣವನ್ನು ಮೊದಲು ಇಲ್ಲವಾಗಿಸುತ್ತಾರೆ.
ಎನ್.ಸಿ. ಮಹೇಶ್‌ ಬರೆಯುವ ರಂಗ ವಠಾರ ಅಂಕಣ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ