Advertisement
ಸುಮಾ ಸತೀಶ್

ಸುಮಾ ಸತೀಶ್‌ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ),  ಮನನ - ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು),  ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು - ಬರೆಹ) ಇವರ ಪ್ರಕಟಿತ ಕೃತಿಗಳು.

ಇಷಿತಾ ಗಂಗೂಲಿಯವರ ನಾಟಕದ ಮೂಲಕ ಮತ್ತೆ ಕಾಳಿದಾಸನ ಓದು…

“ಇಷಿತಾ ತಮ್ಮ ನಿಲುವುಗಳನುಸಾರ ಶಕುಂತಲೆಯ ಪಾತ್ರವನ್ನ ಇಂದಿನ ಸಂವೇದನೆಯ ಹಿನ್ನೆಲೆಯಲ್ಲಿ ಕಟ್ಟಬಹುದಾದರೆ ನಾನ್ಯಾಕೆ ನನ್ನ ಕಣ್ಣೆದುರಿನ ಶಕುಂತಲೆಯ ವಿವರಗಳ ಬಗ್ಗೆ ಹುಡುಗನಲ್ಲಿ ಚರ್ಚಿಸಬಾರದು ಅನಿಸಿತು. ‘ಅಂದಿನ ಶಕುಂತಲೆಗೆ ಆ ಸ್ಥಿತಿ ಒದಗಲಿಕ್ಕೆ ಆಕೆಯ ಮೈಮರೆವು ಹಾಗೂ ದೂರ್ವಾಸರ ಶಾಪ ಕಾರಣ. ದುಷ್ಯಂತ ನೆಪ ಅಷ್ಟೇ. ಈಗ ನೀನು ಹೇಳಿದ್ಯಲ್ಲ… ಆ ಶಾಕುಂತಲೆಯ ಬದುಕು…”

Read More

‘ನಟನ’ದಲ್ಲಿ ‘ಸುಭದ್ರಾ ಕಲ್ಯಾಣ’ – ಎರಡು ಬಗೆಗಳ ಸಂಗಮ…

“ಮತ್ತೂ ಒಂದು ಸಂಗತಿ ತಿಳಿಯಿತು. ಏನೆಂದರೆ ನಟನ ಕಲಾವಿದರಿಗೆ ‘ಸುಭದ್ರಾ ಕಲ್ಯಾಣ’ ನಾಟಕದ ಹಾಡುಗಳನ್ನ ಕಲಿಸಿದವರು ಪರಮಶಿವನ್ ಸರ್ ಅವರು ಎಂದು. ಆದರೆ ಅವರು ನಿರ್ಗಮಿಸಿದ ಮೇಲೆ ಪರಮಶಿವನ್ ಅವರಿಂದ ತರಬೇತುಗೊಂಡ ನಟರಿಗೆ ಹಾರ್ಮೋನಿಯಂ ಸಾಥ್ ನೀಡಲು ಪ್ರೀತಿಯಿಂದ ಬಂದವರು…”

Read More

ಆ ಪೀರ್ ಸಾಹೇಬರು ಯಾರು ಮತ್ತು ಈ ಪೀರ್ ಸಾಹೇಬರು ಯಾರು..?

“ತಾತನ ನೆನಪು ವಿಚಿತ್ರವಾಗಿ ಕಾಡಲು ಆರಂಭವಾಯಿತು. ಅವರು ತಾವು ನಾಟಕ ಕಲಿಸಲು ಬಳಸುತ್ತಿದ್ದ ಸ್ಕ್ರಿಪ್ಟ್ ಗಳನ್ನ ಒಂದು ಟ್ರಂಕಿನಲ್ಲಿ ತುಂಬಿಟ್ಟಿದ್ದರು. ಅವರು ನಿರ್ಗಮಿಸಿದ ಮೇಲೆ ಅದನ್ನ ಯಾರೂ ತೆರೆದಿರಲಿಲ್ಲ. ಹಾರ್ಮೋನಿಯಂನಿಂದ ಅವರ ನೆನಪು ಹೆಚ್ಚು ಒತ್ತರಿಸಿ ಬಂದದ್ದರಿಂದ ನಾನು ಆ ಟ್ರಂಕ್ ತೆರೆದೆ. ತಾತ ಕೈಯಾರೆ ಬರೆದು ಜೋಪಾನವಾಗಿ…”

Read More

ರಂಗ ವಠಾರ ಅಂಕಣದಲ್ಲಿ ‘ಟು ಡೇಟ್ ಆರ್ ನಾಟ್ ಟು ಡೇಟ್..’ ಪ್ರಸಂಗ

“ಅದೊಂದು ವೃತ್ತಿ ನಾಟಕ ತಂಡ. ದಿನನಿತ್ಯ ನಾಟಕ ನಡೆಯುತ್ತಲೇ ಇರುತ್ತದೆ ಮತ್ತು ನಡೆಯಲೇ ಬೇಕು. ಯಾಕೆಂದರೆ ಅದು ಹೊಟ್ಟೆಪಾಡಿನ ಕಾಯಕ. ನಾಟಕ ಮಂದಿಯೇನು ಪ್ರೇಮಕ್ಕೆ ಹೊರತೆ..? ಒಮ್ಮೆ ನಾಟಕ ನಡೆಯುತ್ತಿದೆ. ಅದು ರಾಮಾಯಣ ನಾಟಕ. ನಮಗೆ ಗೊತ್ತಿರುವ ರಾಮಾಯಣದಲ್ಲಿ ಸೀತೆಯನ್ನ ಅಪಹರಿಸಿಕೊಂಡು ಹೋಗುವವನು ರಾವಣ. ಆದರೆ ಆ ವೃತ್ತಿ ನಾಟಕ ತಂಡದಲ್ಲಿ..”

Read More

ನನ್ನ ಪ್ರಶ್ನೆಗಳು ಮತ್ತು ಪೀಟರ್ ಬ್ರೂಕ್ ಎಂಬ ಸೋರ್ಸ್ ಬುಕ್…

ರಂಗಭೂಮಿಯ ಬಗ್ಗೆ ನಮ್ಮಲ್ಲಿ ಅದಮ್ಯ ಒಲವು ಮೊಳೆತರೆ ಸಾಲುವುದಿಲ್ಲ. ನಾನು ಹಿಂದೆ ಕಂಡ ಮತ್ತು ಈಗ ಸದ್ಯದ ಸ್ಥಿತಿಯಲ್ಲಿ ಕಾಣುತ್ತಿರುವ ರಂಗದ ಪರಿಸರದಲ್ಲಿ ನಟನಾಗಬೇಕು, ನಟಿಯಾಗಬೇಕು ಅಂದರೆ ಅವರಿಗೆ ನಿರ್ದೇಶಕರ ಬೈಗುಳಗಳನ್ನ ನುಂಗಿಕೊಳ್ಳುವ ಶಕ್ತಿ ಇರಬೇಕು. ತಾಳ್ಮೆ ಅಗಾಧವಾಗಿರಬೇಕು. ಇನ್ನು ನಿರ್ದೇಶಕನಾಗಲು ಹೊರಟರೆ ಗುಪ್ತಗಾಮಿನಿಯಾಗಿ ಮೂದಲಿಕೆ ಶುರುವಾಗುತ್ತದೆ. ಒಬ್ಬ ನಿರ್ದೇಶಕನ ಆರ್ಟ್ ಫಾರಂ….”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ