ಸುಪ್ರೀತ್ ಕೆ.ಎನ್. ಅವರ ‘ಉತ್ತರ’ ಕಾದಂಬರಿಯ ಪುಟಗಳು
ಈ ಬಾರಿಯ ಸಾಕ್ಷಾತ್ಕಾರ ಕಾರ್ಯಕ್ರಮಕ್ಕೆ ಈಗಾಗಲೇ ಅಭ್ಯರ್ಥಿಗಳು ಬಂದಾಗಿದೆ, ಹೊಸದಾಗಿ ಇನ್ಯಾರು ಬರುವುದಿದೆ ಎಂದು ಯೋಚಿಸಿದಾಗ, ಗುರುದೇವರು ಇನ್ನಿಬ್ಬರು ಬರುತ್ತಾರೆ ಎಂದು ಹೇಳಿದ್ದು ನೆನಪಾಯಿತು. ಜಯಕ್ಕನ ಸಮಾಧಿಯಿಂದ ಗುರುದೇವರ ನಿವಾಸಕ್ಕೆ ಮಾತಾಜೀಯವರು ಹೋಗಿ ತಮ್ಮ ಮನಸ್ಸಿನಲ್ಲಿದದ್ದನ್ನು ಹೇಳುವ ಮೊದಲೇ, ‘ದಕ್ಷಿಣ ಕಡೆಯಿಂದ ಒಬ್ಬ ಬರ್ತಾನೆ. ಅವನಿಗೆ ಸಾಧನೆಗಳನ್ನ ಮಾಡಿಸಿ, ಮೌನ ಕಾರ್ಯಕ್ರಮಕ್ಕೆ ತಯಾರು ಮಾಡಬೇಕು. ಅವನ ಬಗ್ಗೆ ನೀವು ವಿಶೇಷವಾಗಿ ಗಮನವಿಡಿ’ ಎಂದು ಹೇಳಿದರು.
ಸುಪ್ರೀತ್ ಕೆ.ಎನ್. ಅವರ ಹೊಸ ಕಾದಂಬರಿ ‘ಉತ್ತರ’ ಬಿಡುಗಡೆಗೆ ಸಿದ್ಧಗೊಳ್ಳುತ್ತಿದ್ದು ಅದರ ಒಂದು ಅಧ್ಯಾಯ ನಿಮ್ಮ ಓದಿಗೆ