ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕೃಷ್ಣ ದೇವಾಂಗಮಠ ಬರೆದ ಕತೆ
ಹೋಗುತ್ತಾ ನನಗೆನೋ ಕೊಟ್ಟು ಒಂದಷ್ಟು ಕಸಿದುಕೊಂಡು ಟಾಟಾ ಬೈಬೈ ಹೇಳುತ್ತಾ ಕಣ್ಮರೆಯಾಯಿತು. ಮತ್ತೆ ಮನಸ್ಸಿಗೆ ಹೊಸ ತಳಮಳ. ಯಾವ್ಯಾವುದೋ ಮನುಷ್ಯ ಸಹಜ ಆಸೆಗಳು ಮೈತಳೆಯುತ್ತಿದ್ದವು. ಆದರೆ ಎಲ್ಲವೂ ಅಸ್ಪಷ್ಟ ಆಕೃತಿಗಳು. ಬಸಿರಿನಲ್ಲಿ ಕೈ ಕಾಲು ಮೂಡದ ಭ್ರೂಣಾವಸ್ತೆಯ ಹಂತದವು. ಕನಸಿನ ಮಂಜು ಮಂಜಾದ ಚಿತ್ರಪಟಗಳಂತಹವು. ಮನಸ್ಸು ಮತ್ತಷ್ಟು ಗೊಂದಲದ ಗೂಡಾಯಿತು. ಅಲ್ಲಿ ನನ್ನ ಜನರ ಮಧ್ಯದಿಂದ ಸುಂಯ್ಯ ಎಂದು ಹಾರಿದ ವಿಮಾನ ಇಲ್ಲಿ ನನ್ನವರಲ್ಲದ ಮತ್ತು ನನ್ನವರಾಗಲಿರುವವರ ಮಧ್ಯೆ ಸದ್ದಿಲ್ಲದೆ ಇಳಿಸಿತು.
ಕೃಷ್ಣ ದೇವಾಂಗಮಠ ಬರೆದ ಕತೆ “ಪೇಯಿಂಟಿಂಗ್ “