Advertisement

Tag: ಕೆ. ಸತ್ಯನಾರಾಯಣ

ಜೈಲಲ್ಲಿ ನೀತಿಶಾಸ್ತ್ರ: ಕೆ. ಸತ್ಯನಾರಾಯಣ ಸರಣಿ

ಸೆರೆಮನೆಯಲ್ಲಿರುವ, ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿರುವ ಖೈದಿಗಳಿಗೆ ಮನರಂಜನೆ ಇರಬೇಕು, ಅದಕ್ಕೆ ವ್ಯವಸ್ಥೆ ಮಾಡಿಕೊಡಬೇಕು ಎಂಬ ಮಾತನ್ನು ನಾನು ಇದುವರೆಗೆ ಎಲ್ಲೂ ಕೇಳಿಲ್ಲ. ಅವರ ಮನೋಧರ್ಮದಲ್ಲಿ ಏನಾದರೂ ಸುಧಾರಣೆ ಆಗಬೇಕು ಎನ್ನುವುದಾದರೆ, ಧಾರ್ಮಿಕ ಪ್ರವಚನಗಳನ್ನು ಏರ್ಪಡಿಸಲಿ, ಭಗವದ್ಗೀತೆ ಮೇಲೆ ಉಪನ್ಯಾಸ ನೀಡಲಿ, ಭಜನೆ ಇರಲಿ, ಹಾಡುಗಾರರನ್ನು ಕರೆಸಿ ದೇವರನಾಮ ಹೇಳಿಸಿ, ಪ್ರಾರ್ಥನೆ ಇರಲಿ.
ಕೆ. ಸತ್ಯನಾರಾಯಣ ಬರೆಯುವ “ಜೈಲು ಕತೆಗಳು” ಸರಣಿ

Read More

ಜೈಲಿಗೇಕೆ ರಂಗಾಯಣ?: ಕೆ.ಸತ್ಯನಾರಾಯಣ ಸರಣಿ

ಪಾಟೀಲರೇ ಮತ್ತೆ ಮತ್ತೆ ಸಂದರ್ಶನಗಳಲ್ಲಿ ಹೇಳುತ್ತಿದ್ದ ಹಾಗೆ, ಖೈದಿಗಳಿಗೆ ನಟನೆಯಲ್ಲಿ ಇನ್ನಿಲ್ಲದಷ್ಟು ಪ್ರಬುದ್ಧತೆ, ತೀವ್ರತೆ, ತನ್ಮಯತೆ ಬಂದಿತ್ತು. ನಾಟಕದ ಮಾತುಗಳಿಗೆ ಅವರು ನೂರಕ್ಕೆ ನೂರರಷ್ಟು ಜೀವ ತುಂಬುತ್ತಿದ್ದರು. ನಾಟಕ ಪ್ರದರ್ಶನ ಮುಗಿದ ಮೇಲೂ, ಶ್ರೀರಾಮ, ಶ್ರೀಕೃಷ್ಣ, ಧರ್ಮರಾಯ, ವಿಭೀಷಣ, ಬುದ್ಧ, ಇಂಥವರ ವೇಷಭೂಷಣಗಳಲ್ಲೇ ಇರಲು ಆಸೆ ಪಡುತ್ತಿದ್ದರು. ಕೇಂದ್ರ ಕಾರಾಗೃಹದ ಗ್ರಂಥಾಲಯ ಪುರಾತನವಾದದ್ದು.
ಕೆ. ಸತ್ಯನಾರಾಯಣ ಬರೆಯುವ “ಜೈಲು ಕತೆಗಳು” ಸರಣಿಯ ಏಳನೆಯ ಬರಹ ನಿಮ್ಮ ಓದಿಗೆ

Read More

ಜೈಲಿನಲ್ಲಿ ಇಂದ್ರಲೋಕ: ಕೆ. ಸತ್ಯನಾರಾಯಣ ಸರಣಿ

ಎಲ್ಲವೂ ಭರ್ತಿಯಾಗಿದ್ದವು. ಖಾಲಿಯಾದ ತಕ್ಷಣ ಹೊಸಬರು ಯಾರಾದರೂ ತಕ್ಷಣ ಬಂದು ಹಿಡಿದುಕೊಂಡುಬಿಡುತ್ತಿದ್ದರು. ಸಚಿವರು, ನಾಯಕರು, ಪದಾಧಿಕಾರಿಗಳು, ಕುಲಾಧಿಪತಿಗಳು, ಗುತ್ತಿಗೆದಾರರು, ಅಭಿಯಂತರರು, ಒಬ್ಬರ ಮೇಲೆ ಒಬ್ಬರು, ಒಬ್ಬರ ಹಿಂದೆ ಒಬ್ಬರು. ಪಿಸುಮಾತುಗಳಲ್ಲಿ ಕೇಳಿಸಿದ ಪ್ರಕಾರ, ನ್ಯಾಯಾಲವು ಜಾಮೀನು ಆದೇಶವನ್ನು ನೀಡುವಾಗ, ರದ್ದುಪಡಿಸುವಾಗ, ಇಂದ್ರಭವನದಲ್ಲಿ ಯಾವ ರೀತಿಯ, ಯಾವ ಸ್ತರದ ಮನೆಗಳು, ವಿಲ್ಲಾಗಳು ಯಾವಾಗ ಖಾಲಿಯಾಗುತ್ತವೆ….
ಕೆ. ಸತ್ಯನಾರಾಯಣ ಬರೆಯುವ “ಜೈಲು ಕತೆಗಳು” ಸರಣಿ

Read More

ಜೈಲು ಮತ್ತು ಮಳೆ: ಕೆ. ಸತ್ಯನಾರಾಯಣ ಸರಣಿ

ದೂರದೃಷ್ಟಿಯುಳ್ಳ ಆಡಳಿತಗಾರರ ಲೆಕ್ಕಾಚಾರವನ್ನೂ ಮೀರಿ ಅಪರಾಧಿಗಳು, ಪಾಪಿಗಳ ಸಂಖ್ಯೆ ಮಿತಿಮೀರಿ ಹೆಚ್ಚುತ್ತಲೇ ಇತ್ತು. ನಗರವು ಬೆಳೆದಂತೆ, ಎಲ್ಲ ವರ್ಗದ ಜನರು, ತಂತ್ರಜ್ಞರು, ಪೋಲೀಸರು ಕೂಡ ಹೆಚ್ಚಾಗುತ್ತಾರೆ ಎಂಬುದು ನಿಜವಾದರೂ, ಅಪರಾಧಿಗಳ ಸಂಖ್ಯೆಯ ಬೆಳವಣಿಗೆಯ ದರ ಎಲ್ಲ ಅನುಪಾತಗಳನ್ನೂ ಮೀರಿತ್ತು. ಪೋಲೀಸರ ದಕ್ಷತೆ, ನಾಗರಿಕರ ಸಮಾಜಪ್ರಜ್ಞೆಯಿಂದಾಗಿ ಎಲ್ಲ ಠಾಣೆಗಳಲ್ಲೂ ಹೆಚ್ಚು ಹೆಚ್ಚು ದೂರುಗಳು ಬರುತ್ತಿದ್ದವು, ದಾಖಲಾಗುತ್ತಿದ್ದವು. ಕಳ್ಳರು, ಕೊಲೆಗಡುಕರು ಕೂಡ ಬೇಗ ಬೇಗ ಸಿಕ್ಕಿಹಾಕಿಕೊಳ್ಳುತ್ತಿದ್ದರು.
ಕೆ. ಸತ್ಯನಾರಾಯಣ ಬರೆಯುವ “ಜೈಲು ಕತೆಗಳು” ಸರಣಿಯ ಐದನೆಯ ಬರಹ ನಿಮ್ಮ ಓದಿಗೆ

Read More

ಜೈಲ್‌ನಿಂದ ಹೊರಬಂದ ಇಲಿ: ಕೆ.‌ ಸತ್ಯನಾರಾಯಣ ಸರಣಿ

ದಿನ ಕಳೆದಂತೆ, ಜಯಮ್ಮನಿಗೆ ಇಲಿಯದೇ ಕಂಪನಿ, ಸಾಂಗತ್ಯ. ಒಂದೆರಡು ದಿನ ಆದಮೇಲೆ, ಅದರ ನುಣುಪಾದ ಮೈಯನ್ನು ಸವರಲು ನೋಡಿದರು. ಕೊಸರಿಕೊಂಡಿತು. ಆದರೂ ಒಳಗಡೆ ಇಷ್ಟವಾಯಿತೆಂದು ಕಾಣುತ್ತದೆ, ಮತ್ತೆ ಮತ್ತೆ ಹತ್ತಿರ ಬರುತ್ತಿತ್ತು. ಒಂದೆರಡು ಸಲ ತೊಡೆ, ಮಂಡಿಯ ಹತ್ತಿರ ಬಂತು. ಮತ್ತೆ ಸವರಿದರು.
ಕೆ. ಸತ್ಯನಾರಾಯಣ ಬರೆಯುವ “ಜೈಲು ಕತೆಗಳು” ಸರಣಿಯ ನಾಲ್ಕನೆಯ ಬರಹ ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ