ದಂಡಕಾರಣ್ಯದ ಆದಿವಾಸಿಗಳ ದೇವ-ದೇವಿಯರು
ಶಿವ ಶಕ್ತಿಯ ಸಂಗಮವು ನಾನಾರೀತಿಯಲ್ಲಿ ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ ಮತ್ತು ವಿಸ್ಮಯವೆನಿಸುವ ರೀತಿಗಳಲ್ಲಿ ಅದು ಅಭಿವ್ಯಕ್ತಿ ಹೊಂದಿದೆ. ಬುಡಕಟ್ಟಿನವರ ದೇವಲೋಕವೂ ಇದಕ್ಕೆ ಹೊರತಾಗಿಲ್ಲ. ನದಿಯ ನಡುವೆ ಒಂದು ಕಲ್ಲಿದೆ. ಅಲ್ಲಿ ತ್ರಿಶೂಲದ ಹಾಗೂ ಒಂದು ಪಾದದ ಗುರುತಿದೆ. ದಂತೇಶ್ವರಿ ಮತ್ತು ಭೈರವರು ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದಾಗ ದೇವಿಯು ಶಿವ ಮೋಸ ಮಾಡಿದ ಎಂದು ಕೋಪದಿಂದ ಅವನ ಮೇಲೆ ಎಸೆದ ತ್ರಿಶೂಲ ಅಲ್ಲಿ ಸಿಕ್ಕಿಕೊಂಡಿದೆ ಎನ್ನುವುದು ನಂಬಿಕೆ. ಅದಕ್ಕೇ ತಪ್ಪಿಸಿಕೊಂಡು ಹೋದ ಭೈರವನ ದೇವಾಲಯ ನದಿಯ ಆಚೆ ದಡದಲ್ಲಿದೆ.
ಗಿರಿಜಾ ರೈಕ್ವ ಬರೆಯುವ ಅಂಕಣ ‘ದೇವಸನ್ನಿಧಿ’