Advertisement

Tag: ಡಾ. ಎಂ. ವೆಂಕಟಸ್ವಾಮಿ

ಪ್ರಾಣಪಕ್ಷಿಗಳು ಹಾರಿಹೋದವು: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಕೊನೆಗೆ ರಾತ್ರಿ 12 ಗಂಟೆಗೆ ಯೂನಿಫಾರ್ಮ್ ಬಟ್ಟೆ ಕಾಣಿಸಿಕೊಂಡಿತು. ನಿಧಾನವಾಗಿ ಉಸಿರಿಡಿದುಕೊಂಡು ಬಾಬು ದೇವವನ್ನು ಕಲ್ಲುಮಣ್ಣಿನ ಕೆಳಗಿಂದ ಹೊರಕ್ಕೆ ತೆಗೆದು ನೋಡಿದರು! ಆತನ ದೇಹದ ಮೇಲಿನ ಯೂನಿಫಾರ್ಮ್ ಬಟ್ಟೆಗಳು ರಕ್ತದಿಂದ ಹೆಪ್ಪು ಕಟ್ಟಿಕೊಂಡಿದ್ದವು. ದೇಹ ನುಜ್ಜುಗುಜ್ಜಾಗಿ ಹೋಗಿತ್ತು. ದೊಡ್ಡ ಕಲ್ಲುಮಣ್ಣಿನ ರಾಶಿ ಅವನ ಮೇಲೆ ಕುಸಿದು ಬಿದ್ದು ಕೆಲವೇ ನಿಮಿಷಗಳಲ್ಲಿ ಅವನ ಪ್ರಾಣಪಕ್ಷಿ ಹಾರಿಹೋಗಿತ್ತು. ಅವನ ದೇಹವನ್ನು ನೋಡಿದ ಕಾರ್ಮಿಕರು ಸ್ವಲ್ಪ ಹೊತ್ತು ಏನೂ ಮಾತನಾಡದೆ ವಿದ್ಯುತ್ ಶಾಕ್ ಹೊಡೆದುಕೊಂಡಂತೆ ಹಾಗೇ ನಿಂತುಕೊಂಡೇ ಇದ್ದರು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿ

Read More

ದಾರಿ ತಪ್ಪಿದ ಪ್ರೀತಿ ಬದುಕು ಕಟ್ಟಿಕೊಳ್ಳುವುದನ್ನು ತಪ್ಪಿಸುವುದೇ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಕಾಲಿನ ಹೆಬ್ಬೆರಳಲ್ಲಿ ರಕ್ತ ಒಸರುತ್ತಿದೆ. ಕನಕ, “ಅಯ್ಯೋ ಏನ್ರಿ ಇದು?” ಎಂದಳು. ಸೆಲ್ವಮ್, “ಏನೂ ಇಲ್ಲ. ಅಲ್ಲೊಂದು ಕಲ್ಲು ಹೊಡೆದುಬಿಟ್ಟಿತು. ಒಂದಷ್ಟು ಅರಿಶಿನ, ಒದ್ದೆಬಟ್ಟೆ ತೆಕೊಂಡು ಬಾ” ಎಂದ. ಕನಕ ಮನೆ ಒಳಕ್ಕೆ ಹೋಗಿ ಚೆಂಬಿನಲ್ಲಿ ನೀರು ತಂದು “ಸುಮತಿ ನೀರಾಕು ನಿಮ್ಮಪ್ಪ ಬೆರಳುಗಳನ್ನು ತೊಳೆದುಕೊಳ್ಳಲಿ. ನಾನು ಅರಿಶಿನ ಬಟ್ಟೆ ತರ್ತೀನಿ” ಎಂದು ಮತ್ತೆ ಮನೆ ಒಳಕ್ಕೆ ಹೋದಳು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಐದನೆಯ ಕಂತು ನಿಮ್ಮ ಓದಿಗೆ

Read More

ಕೆನ್ನೆಮೇಲೆ…. ಕೆಂಪು ಬಾಸುಂಡೆ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಸ್ವಲ್ಪ ಹೊತ್ತಾದ ಮೇಲೆ ಏನೋ ಜ್ಞಾಪಕ ಬಂದಂತೆ ಎದೆಯ ಮೇಲಿನ ಶರ್ಟ್ ನೋಡಿಕೊಂಡ. ಶರ್ಟ್ ಮೇಲೆ ಎರಡು ತೊಟ್ಟ ರಕ್ತ ಬಿದ್ದಿರುವುದು ಕಾಣಿಸಿತು. ಈಗ ಏನು ಮಾಡುವುದು? ಮನೆಗೋದರೆ ಅಮ್ಮ ಇಲ್ಲ ಸುಮತಿ ನೋಡೇನೋಡುತ್ತಾರೆ. ಮೂಗು ಊದಿಕೊಂಡಿದೆಯೇನೊ ಎನ್ನುವ ಅನುಮಾನ ಬಂದು, ಗುಡಿಯ ಒಳಗಡೆ ಹೋಗಿ ಕನ್ನಡಿಯಲ್ಲಿ ನೋಡಿದರೆ ಹೇಗೆ ಎನ್ನುವ ಆಲೋಚನೆ ಬಂದರೂ ಗುಡಿಯಲ್ಲಿ ಸಾಕಷ್ಟು ಜನರಿದ್ದು ಹೋಗುವುದು ಸರಿಇಲ್ಲ ಎಂದು ಅಲ್ಲೇ ಕುಳಿತುಕೊಂಡ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿ

Read More

ದುಬೈನ ಬುರ್ಜ್ ಖಲೀಫಾ ಎಂಬ ಸ್ಕೈಸ್ಕ್ರಾಪರ್: ಡಾ. ಎಂ. ವೆಂಕಟಸ್ವಾಮಿ ಬರಹ

ವಾಸ್ತುಶಿಲ್ಪ ಮತ್ತು ಎಂಜಿನಿಯರಿಂಗ್ ಪ್ರಕ್ರಿಯೆಯ ಒಂದು ನಿರ್ದಿಷ್ಟ ಹಂತದಲ್ಲಿ, ಮೂಲ ಎಮಾರ್ ಡೆವಲಪರ್‌ಗಳಿಗೆ ಹಣಕಾಸಿನ ಸಮಸ್ಯೆ ಎದುರಾಗಿ ಹೆಚ್ಚಿನ ಹಣದ ಅಗತ್ಯಬಿದ್ದಾಗ ಆಗಿನ ಯುಎಇ’ಯ ಆಡಳಿತಗಾರ ಶೇಖ್ ಖಲೀಫಾ ಅವರು ಹಣದ ನೆರವು ನೀಡಿದರು. ಆದ್ದರಿಂದ ಕಟ್ಟಡದ ಮೊದಲ `ಬುರ್ಜ್ ದುಬೈ’ ಹೆಸರನ್ನು `ಬುರ್ಜ್ ಖಲೀಫಾ’ ಎಂದು ಬದಲಾಯಿಸಲಾಯಿತು.
ದುಬೈ ಪ್ರವಾಸದ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ ನಿಮ್ಮ ಓದಿಗೆ

Read More

ಕಪ್ಪು ನೆಲದಲ್ಲಿ ಹುಟ್ಟಿಕೊಂಡಿತು ಚಿನ್ನದ ನಗರ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಎಲ್ಲರೂ ಅವರನ್ನೇ ನೋಡುತ್ತಿದ್ದರು. ಸೆಲ್ವಿಗೆ ಬೇರೆ ದಾರಿ ಕಾಣದೇ ಇನ್ನೊಂದು ಕೈಯಲ್ಲಿದ್ದ ಪುಸ್ತಕಗಳನ್ನು ನೆಲಕ್ಕೆ ಹಾಕಿ ಮಣಿ ಕೆನ್ನೆಗೆ ಜೋರಾಗಿ ಬಾರಿಸಿದಳು. ಬಾರಿಸಿದ ಏಟಿಗೆ ಆ ಮರದಲ್ಲಿದ್ದ ಹಕ್ಕಿಗಳೆಲ್ಲ ಹಾರಿಹೋದವು. ಸುತ್ತಲೂ ನಿಂತು ನೋಡುತ್ತಿದ್ದ ಹುಡುಗರಲ್ಲಿ ಕೆಲವರು ತಮ್ಮ ಕೆನ್ನೆಗಳನ್ನು ಮುಟ್ಟಿನೋಡಿಕೊಂಡು ಕಣ್ಣುಕಣ್ಣುಬಿಟ್ಟರು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಮೂರನೆಯ ಕಂತು ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ