Advertisement

Tag: Australia

ಆಸ್ಟ್ರೇಲಿಯಾದ ಹೊಸ ರಾಜ, ಹೊಸ ಭವಿಷ್ಯದ ಕನಸುಗಳು

ತನ್ನದೇ ಆದ ‘ಸೂರ್ಯ ಮುಳುಗದ’ ನಾಡು ಯುನೈಟೆಡ್ ಕಿಂಗ್ಡಮ್ ಸಾಮ್ರಾಜ್ಯದ ಅಧಿಪತಿಯಾಗಿದ್ದ, ಅದರ ಜೊತೆಗೆ ಐವತ್ತಾರು ಕಾಮನ್ವೆಲ್ತ್ ರಾಷ್ಟ್ರಗಳ ನಾಯಕಿಯಾಗಿದ್ದ ರಾಣಿ ಎರಡನೆ ಎಲಿಝಬೆತ್ ಕೂಡ ಹೀಗೆಯೆ ಎಪ್ಪತ್ತು ವರ್ಷಗಳ ಸುದೀರ್ಘ ಕಾಲದಲ್ಲಿ ‘ಮುಳುಗದ’ ಸೂರ್ಯನಂತೆ ರಾರಾಜಿಸುತ್ತ ಸಾಮ್ರಾಜ್ಞಿಯಾಗಿದ್ದರು. ‘ನನ್ನ ಜೀವನವನ್ನು ನಿಮ್ಮ ಸೇವೆಗಾಗಿ ಮುಡಿಪಿಟ್ಟಿದ್ದೀನಿ’ ಎನ್ನುತ್ತಾ ಸದಾಕಾಲ ತಮ್ಮ ಕಾರ್ಯಕ್ಷಮತೆ ತೋರಿದರು ಎನ್ನುವುದೀಗ ಇಡೀ ಪ್ರಪಂಚದ ಜನರಿಗೆ ಅತ್ಯುತ್ತಮ ಉದಾಹರಣೆಯಾಗಿದೆ. ಡಾ. ವಿನತೆ ಶರ್ಮಾ ಬರೆಯುವ ‘ಆಸ್ಟ್ರೇಲಿಯಾ ಪತ್ರ’

Read More

ಬೆಳಕು ಬಣ್ಣದ ಭ್ರಮಾಲೋಕ ​ರಿವರ್ ಫೈರ್

ಬ್ರಿಸ್ಬೇನ್ ಫೆಸ್ಟಿವಲ್ ಎನ್ನುವ ಆನಂದದ ಲೋಕದಲ್ಲಿ ಈ ಬಾರಿ ಉತ್ಸಾಹ ಒಂದು ತೂಕ ಹೆಚ್ಚೇ. ಕಳೆದೆರಡು ವರ್ಷಗಳಲ್ಲಿ ನಡೆಯದ ಉತ್ಸವ ಈ ಬಾರಿ ಹೆಚ್ಚು ರಂಗಿನಿಂದ ನಡೆಯುತ್ತಿದೆ. ಕಳೆದದ್ದನ್ನ ಗಿಟ್ಟಿಸಿಕೊಳ್ಳಲು ಹಬ್ಬದ ತಯಾರಿ ಜೋರಾಗೆ ನಡೆದಿದೆಯೆಂದು ಟಿವಿ ವಾಹಿನಿಗಳು ಬಿತ್ತರಿಸುತ್ತಿವೆ. ಈ ಫೆಸ್ಟಿವಲ್‌ ನಡೆಯುವ  ಮೂರು ವಾರಗಳ ಕಾಲದಲ್ಲಿ ಬರಹಗಾರರ ಶಿಬಿರ, ಅಂತಾರಾಷ್ಟ್ರೀಯ ಚಲನಚಿತ್ರ ಪ್ರದರ್ಶನ, ಕಲೆಗಳ ಪ್ರದರ್ಶನ, ಸೌತ್ ಬ್ಯಾಂಕಿನಲ್ಲಿ ಆಹಾರ ಮೇಳ ಇನ್ನೂ ಹಲವಾರು ವೈವಿಧ್ಯತೆಗಳುಳ್ಳ ಕಾರ್ಯಕ್ರಮಗಳಿರುತ್ತವೆ.ಇವೆಲ್ಲಕ್ಕೂ ಕಳಶವಿಡುವಂತೆ ಇಂದು ಉದ್ಘಾಟನೆಯ ಶನಿವಾರದಂದು ರಾತ್ರಿ River Fire ನಡೆಯುತ್ತದೆ.  ಬ್ರಿಸ್ಬೇನ್‌ ನದಿಯು ಪಟಾಕಿಗಳ ಬಣ್ಣಗಳನ್ನು ಪ್ರತಿಫಲಿಸುವ ಖುಷಿಯಲ್ಲಿ ಹರಿಯುತ್ತಿದೆ. ಈ ಬಾರಿಯ ಆಸ್ಟ್ರೇಲಿಯಾ ಪತ್ರದಲ್ಲಿ ಡಾ. ವಿನತೆ ಶರ್ಮ  ಸಡಗರದ ಸುದ್ದಿಯನ್ನು ಬರೆದಿದ್ದಾರೆ. 

Read More

ಬಿಸಿಲ ಧಗೆ, ಚಳಿಯ ಹೊರೆಗಳ ನಡುವೆ ಅರಳುವ ಡಾಫೋಡಿಲ್ ಎಲ್ಲಿದೆ..

ಆಸ್ಟ್ರೇಲಿಯದ  ಹೊಸ ಪ್ರಧಾನಿಗಳು ಚುನಾಯಿತರಾದ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿದ ಮೊದಲ ನಾಲ್ಕು ವಾರಗಳಲ್ಲಿ ಊರೂರು, ಅಂದರೆ ವಿದೇಶಗಳನ್ನು, ಸುತ್ತಿದ್ದಕ್ಕೆ ದೇಶದ ಜನರ ಮತ್ತು ವಿರೋಧಪಕ್ಷದ ಟೀಕೆಗೆ ಗುರಿಯಾದರು. ಆದರೂ ಕೂಡ ತಮ್ಮ ಪರದೇಶ ಸುತ್ತಾಟವನ್ನು ಸಮರ್ಥಿಸಿಕೊಂಡು ‘ನೆರೆಹೊರೆಯವರೊಂದಿಗೆ ಆಸ್ಟ್ರೇಲಿಯದ ರಾಜಕೀಯ ಸಂಬಂಧ ಕುಂಟುತ್ತಿತ್ತು, ನಾವು ಆ ದೇಶದ ನಾಯಕರ ವಿಶ್ವಾಸವನ್ನು ಕಳೆದುಕೊಂಡಿದ್ದೆವು. ಹಾಗಾಗಿ ಅವರೊಂದಿಗಿನ ಸಂಬಂಧವನ್ನು ಕುದುರಿಸಿಕೊಳ್ಳುವುದೂ ಮುಖ್ಯವಾಗಿತ್ತು.
ಡಾ. ವಿನತೆ ಶರ್ಮಾ ಅಂಕಣ

Read More

‘ಊಲುರು ಮಾತು’ ಎಂಬ ಹೊಸ ಭಾಷ್ಯ

ದೇಶೀಯ ಮಟ್ಟದಲ್ಲಿ ಆಡಳಿತ ನಡೆಸುವ ಪಾರ್ಲಿಮೆಂಟಿಗೆ ಅಬೊರಿಜಿನಲ್ ಜನರ ಸಮಿತಿಯನ್ನು ನೇಮಿಸಿ ಅವರ ದನಿಗೆ ಪುನಃಶ್ಚೇತನ ಕೊಡುವ ಭರವಸೆಯನ್ನು ಆಸ್ಟ್ರೇಲಿಯಾದ ಹೊಸ ಸರ್ಕಾರ ನೀಡಿದೆ.  ಅಷ್ಟೇ ಅಲ್ಲ, ದೇಶದ ಸಂವಿಧಾನದಲ್ಲಿ ಅವರ ದನಿಯನ್ನು ಸೇರ್ಪಡಿಸುವ ಮಾತನ್ನು ಕೊಟ್ಟಾಗಿದೆ. ಹೊಸ ಪ್ರಧಾನಮಂತ್ರಿಗಳ ಮಾತಿನಿಂದ ಅಬೊರಿಜಿನಲ್ ಜನಸಮುದಾಯಗಳ ನಾಯಕರಲ್ಲಿ, ಹಿರಿಯರಲ್ಲಿ ಸಂಚಲನೆ ಮೂಡಿದೆ. ಆಸ್ಟ್ರೇಲಿಯಾ ಪತ್ರದಲ್ಲಿ ಡಾ. ವಿನತೆ ಶರ್ಮಾ ಅವರು ಆಸ್ಟ್ರೇಲಿಯಾದ ವರ್ತಮಾನಗಳನ್ನು ಬರೆದಿದ್ದಾರೆ. 

Read More

ನಗರ-ಬೆಟ್ಟಗಳ ಕಿರು ಕತೆಗಳು

ಬೆಟ್ಟ ಹತ್ತೋದು ಎಂದರೆ ರಾಷ್ಟ್ರೀಯ ರಕ್ಷಿತ ವನಗಳಲ್ಲಿ ಅರಣ್ಯ ಇಲಾಖೆಯ ರೇಂಜರುಗಳು ಸೊಗಸಾದ ದಾರಿ ಮಾಡಿರುತ್ತಾರೆ. ಅದೇ ದಾರಿಯಲ್ಲೆ ನಾವು ನಡೆದು, ಬೆಟ್ಟದ ಮೇಲಿರುವ ವ್ಯೂ ಪಾಯಿಂಟ್ ತಲುಪಿ ಸುತ್ತಮುತ್ತಲಿನ ಪ್ರದೇಶಗಳನ್ನು ಪಕ್ಷಿನೋಟದಲ್ಲಿ ನೋಡುವುದು. ದಾರಿ ಬಿಟ್ಟು ಅಕ್ಕಪಕ್ಕ ಇರುವ ಕಾಡಿನಲ್ಲಿ ತಿರುಗಾಡುವಂತಿಲ್ಲ. ರಕ್ಷಿತ ವನ ಅಥವಾ ಕಾಡು ಎನ್ನುವ ಎಚ್ಚರಿಕೆಯನ್ನು ಪಾಲಿಸಿಯೇ ಮುಂದುವರೆಯಬೇಕು. ಇದರಿಂದ ಪರಿಸರಕ್ಕೆ ಒಳ್ಳೆಯದು. ಡಾ. ವಿನತೆ ಶರ್ಮಾ ಬರೆಯುವ ‘ಆಸ್ಟ್ರೇಲಿಯಾ ಪತ್ರ’

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ