Advertisement

Tag: Column

ಹೊಳೆಯೊಂದು ಹರಿದ್ಹಾಂಗೆ…..: ಸುಧಾ ಆಡುಕಳ ಅಂಕಣ

ತಮ್ಮೂರಿನ ಹೊಳೆಗೂ ಒಂದು ಪುರಾಣವಿರುವುದು ತಿಳಿದು ನೀಲಿಗೆ ಬಹಳ ಖುಶಿಯಾಯಿತು. ಮರುಕ್ಷಣವೇ ಇನ್ನಿಲ್ಲವಾಗುತ್ತಿರುವ ಹೊಳೆಯ ನೆನಪಾಗಿ ವಿಷಾದ ಆವರಿಸಿತು. ಅವಳ ಇತಿಹಾಸದ ಶಿಕ್ಷಕರು ಕಾಣೆಯಾಗಿರುವ ನದಿಗಳ ಬಗೆಗೆ ಎಷ್ಟೊಂದು ವಿಷಯಗಳನ್ನು ಹೇಳಿದ್ದರು. ತಮ್ಮೂರಿನ ಹೊಳೆ ಹೋಗಿ ಸೇರುವ ನದಿಯೆಲ್ಲಿಯಾದರೂ ಕಾಣೆಯಾದರೆ ಅದೊಂದು ವಿದ್ಯಮಾನವಾಗಿ ಉಳಿಯುತ್ತದೆ. ಹೊಳೆ ಕಾಣೆಯಾದರೆ ಹೇಳಹೆಸರಿಲ್ಲದೇ ಮರೆಯಾಗಿಬಿಡುತ್ತದೆ. ಹೀಗೆಲ್ಲ ಯೋಚನೆಗಳು ರಾತ್ರಿಯಿಡೀ ಅವಳನ್ನು ಕಾಡತೊಡಗಿದವು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಇಪ್ಪತ್ತೈದನೆಯ ಹಾಗೂ ಕೊನೆಯ ಕಂತು ನಿಮ್ಮ ಓದಿಗೆ

Read More

ಅಮೇರಿಕಾ ಜೀವನ ತತ್ವ: ಎಂ.ವಿ ಶಶಿಭೂಷಣ ರಾಜು ಅಂಕಣ

ಅಮೇರಿಕಾದಲ್ಲಿ ಹಣಕ್ಕೆ ಮಹತ್ವ ಹೆಚ್ಚಿದೆ. ಎಲ್ಲವೂ ದುಬಾರಿ. ಹೋಟೆಲ್‌ನಲ್ಲಿ ಸ್ನೇಹಿತರು ತಿಂಡಿಗೋ, ಊಟಕ್ಕೋ ಹೋದರೆ ಬಿಲ್ಲನ್ನು ಎಲ್ಲರೂ ಹಂಚಿಕೊಳ್ಳುತ್ತಾರೆ, ಒಬ್ಬರೇ ಕೊಡಲು ಬಿಡುವುದಿಲ್ಲ. ಯಾವುದೇ ಪ್ರದೇಶಕ್ಕೆ ಹೋದಾಗ, ಪ್ರವಾಸಕ್ಕೆ ಹೋದಾಗ ಖರ್ಚನ್ನು ಸಮಾನವಾಗಿ ಹಂಚಿಕೊಳ್ಳುತ್ತಾರೆ. ಯಾರದಾದರೂ ಮನೆಗೆ ಹೋದಾಗ ಏನಾದರೂ ಉಡುಗೊರೆ ತೆಗೆದುಕೊಂಡು ಹೋಗುತ್ತಾರೆ.
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ

Read More

ಎಲ್ಲರಂಥವನಲ್ಲ ನನ್ನಪ್ಪ..: ಗುರುಪ್ರಸಾದ ಕುರ್ತಕೋಟಿ ಸರಣಿ

ಅಂತೂ ಇಂತೂ ಟಿಕೆಟ್‌ಗಳು ಆಗಿ ಬಟ್ಟೆಬರೆಗಳನ್ನು ಪ್ಯಾಕ್ ಮಾಡಿ ಭಾರವಾದ ಮನಸ್ಸಿನಿಂದ ಭಾರತಕ್ಕೆ ಪಯಣ ಬೆಳೆಸಿದೆವು. ದೇವರು ನೀಡುವ ಈ ಅನಿರೀಕ್ಷಿತ ತಿರುವುಗಳಿಗೆ ಯಾರೂ ಏನೂ ಮಾಡದಂತಹ ಅಸಹಾಯಕ ಸ್ಥಿತಿ ನಮ್ಮದಾಗಿತ್ತು. ಬೆಂಗಳೂರಿಗೆ ನಾವೆಲ್ಲ ಬಂದು ಇಳಿದಾಗ, ನನ್ನ ಮಾವ ತೀರಿಕೊಂಡು ನಾಲ್ಕು ದಿನಗಳು ಆಗಿತ್ತು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಹದಿನಾರನೆಯ ಬರಹ

Read More

ನೀಲಿ ನೋಡಿದ ಕಾಡು: ಸುಧಾ ಆಡುಕಳ ಅಂಕಣ

ಒಮ್ಮೆ ಅವನೂ, ನೀಲಿಯ ತಂದೆಯೂ ಅಂಟುವಾಳದ ಕಾಯಿಗಳನ್ನು ಹುಡುಕುತ್ತ ಕಾಡಿನಲ್ಲಿ ಬಹುದೂರದವರೆಗೆ ಸಾಗಿದರಂತೆ. ಚೀಲಗಟ್ಟಲೆ ಕಾಯಿಗಳನ್ನು ಕೊಯ್ದು ಮೂಟೆಗಟ್ಟಿ ದಣಿವಾರಿಸಿಕೊಳ್ಳಲೆಂದು ಮರವೊಂದರ ಬೇರಿನ ಮೇಲೆ ಕುಳಿತು ಕವಳ ತಿನ್ನತೊಡಗಿದರಂತೆ. ಸುಮಾರು ಹೊತ್ತಿಗೆ ನೋಡಿದರೆ ಅವರು ಕುಳಿತಿದ್ದ ಬೇರು ನಿಧಾನಕ್ಕೆ ಚಲಿಸಲು ಪ್ರಾರಂಭವಾಯಿತಂತೆ. ಅರೆ! ಇದೇನಿದು? ಎಂದು ಎದ್ದು ದೂರ ನಿಂತರೆ ಮರದ ಬೇರೆಂದು ಅವರು ಕುಳಿತದ್ದು ಮಾದೊಡ್ಡ ಹೆಬ್ಬಾವಿನ ಮೇಲಂತೆ!
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಎಂಟನೆಯ ಕಂತು ನಿಮ್ಮ ಓದಿಗೆ

Read More

ಎಷ್ಟು ಬೆರಗು ಈ ಪ್ರಕೃತಿಯಲಿ…: ಆಶಾ ಜಗದೀಶ್ ಅಂಕಣ

ನಾವೆಲ್ಲಾ ನೀರಿನಲ್ಲಿ ನುಣುಪಾದ ಕಲುಗಳನ್ನು ಎಸೆಯುತ್ತಾ ಆಡುತ್ತೇವೆ. ಚಪ್ಪಟೆಯಾದ ನುಣುಪುಗಲ್ಲುಗಳನ್ನು ಒಂದರ ಮೇಲೆ ಒಂದರಂತೆ ಜೋಡಿಸಿ, ಅದಕ್ಕೇನೋ ಶಕ್ತಿ ಬಂತೆಂದು ಭಾವಿಸಿ, ‘ನಾವು ಆದಷ್ಟು ಬೇಗ ತಲೆ ಮೇಲೊಂದು ಸೂರು ಮಾಡಿಕೊಳ್ಳುವಂತಾಗಲಿ ಶಕ್ತಿಯೇ’ ಎಂದು ಬೇಡಿ, “ಮತ್ತೊಮ್ಮೆ ಬರುವವರೆಗೂ ಹೀಗೆ ಇರಲಿ” ಎಂದು ಕೇಳಿಕೊಂಡು ಪ್ರಾರ್ಥನೆಯನ್ನು ಕೊನೆಗೊಳ್ಳಿಸಿಕೊಳ್ಳುತ್ತೇವೆ.
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಬರಹ ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ