Advertisement

Tag: Kannada Story

ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ

ಇದು ಪಂಚಾಯಿತಿ ಚುನಾವಣೆಯಂತಲ್ಲ ಹಾಗಾಗಿ ಜನರು ಬುದ್ಧಿವಂತರಾಗಿದ್ದರು(?) ಹೆಚ್ಚು ಕೇಳುತ್ತಿದ್ದರು. ಆದರೂ ಒಂದೆರಡು ಕೈ ಬದಲಾಗಿ ಹಣ ಸಿಗುವಾಗ ಬಹಳ ಹೆಚ್ಚಿಗೇನೂ ಸಿಗುತ್ತಿರಲಿಲ್ಲ. ಈ ವಿಷಯದಲ್ಲಿ ಉತ್ತಮ್ ಈಗ ಸಾಕಷ್ಟು ಪಳಗಿದ್ದ. ಹೆಚ್ಚಿನ ಜನರನ್ನು ಸೇರಿಸುತ್ತಿದ್ದ. ಅದಕ್ಕಿಂತ ಹೆಚ್ಚು ತೋರಿಸುತ್ತಿದ್ದ. ಬೇರೆ ಮೂಲಗಳಿಂದ ಹಣ ಪೀಕುತ್ತಿದ್ದ. ಬೇರೆ ಮನೆಯಲ್ಲಿದ್ದರೂ ರಾಮ್, ಲಕ್ಷ್ಮಣ್ ಭಾವನ ಜೊತೆಗೆ ಕೈಜೋಡಿಸಿ ಚುನಾವಣೆಗೆ ದುಡಿಯುತ್ತಿದ್ದರು..
ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ “ಚದುರಂಗ”

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರಾಜು ಹೆಗಡೆ ಕತೆ

ಸಂಜೆಯಾಗುತ್ತಿದ್ದಂತೆ, ಹೆಂಡತಿಗೆ ಅದು ಕಾಡತೊಡಗಿತು. ಸಾವಿರಾರು ರೂಪಾಯಿಯ ಮುಖ ನೋಡಿ ಅವಳ ಬಯಕೆಯನ್ನು ಇಲ್ಲ ಮಾಡದೆವಲ್ಲ, ನಾವೇನು ಅಷ್ಟು ದುಡ್ಡಿನಿಂದ ಹಂಚು ಹಾಕುವುದು ಅಷ್ಟರಲ್ಲೆ ಇದೆ ಎಂದೆಲ್ಲ ಗೊಣಗೊಣ ಮಾಡತ್ತಿದ್ದಳು. ನನಗೂ ಹಾಗೇ ಅನಿಸುತ್ತಿತ್ತು. ಆದರೆ ಅದು ಮುಗಿದ ಕತೆ ಎಂದು ನನಗೆ ನಾನೇ ಹೇಳಿಕೊಂಡು ಮರೆಯಲು ಯತ್ನಿಸುತ್ತಿದ್ದೆ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರಾಜು ಹೆಗಡೆ ಕತೆ “ಫ್ರಿಜ್ಜು”

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರಾಜೀವಗೌಡ ಎಂ.ಜೆ. ಮೇಲೂರು ಕತೆ

ಹೆಜ್ಜೆಯಿಡಲೂ ಎಲ್ಲರೂ ಭಯಬೀಳುತ್ತಿದ್ದ ಕಾಡಿನ ಆ ಅಭೇಧ್ಯ ಕಣಿವೆಗೆ ಅವನು ಹೊಸದೇ ಆದ ಒಂದುದಾರಿ ಮಾಡಿಕೊಂಡು ಬಂದಾಗ, ಅಲ್ಲಿ ಕೆನೆಗಟ್ಟಿದ್ದ ಸೌಂದರ್ಯಕ್ಕೆ ಮಾರುಹೋಗಿದ್ದ. ಅಲ್ಲೇನಿದೆ ಕೇವಲ ಮರ, ಗಿಡ, ಬಳ್ಳಿ, ವಿಷಜಂತುಗಳು, ಕ್ರೂರಪ್ರಾಣಿಗಳು, ರಕ್ತ ಹೀರುವ ಜಿಗಣಿಗಳು ಎನ್ನುತ್ತಿದ್ದವರ ಮಧ್ಯದಲ್ಲಿದ್ದಾಗ ಇಂತಹಕಡೆ ಸೌಂದರ್ಯ ಕಾಣಲು ಬೇರೆಯದೇ ಆದ ಕಣ್ಣಗಳಿರಬೇಕು. ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರಾಜೀವಗೌಡ ಎಂ.ಜೆ. ಮೇಲೂರು ಕತೆ “ಸ್ವೇದಗಂಧಿ”

Read More

ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ

ಕೆಂಪು ಬಣ್ಣದ ರೇಷ್ಮೆ ಸೀರೆಯನ್ನು ಹಿಂದಿನೆರಡು ಬಟ್ಟೆ ತುಂಡುಗಳ ಜೊತೆಗೆ ಜೋಡಿಸುತ್ತಿದ್ದ ಶಂಕ್ರಜ್ಜಿಗೆ ಮದುವೆಯ ನೆನಪು ಬಂದರೂ ಅದು ಮನಸ್ಸಿಗೆ ಖುಷಿ ಕೊಡಲಿಲ್ಲ. ಹಸಿರು, ಹಳದಿ, ಕೆಂಪು ಬಣ್ಣಗಳಿಂದ ತಯಾರಾಗುತ್ತಿದ್ದ ಕೌದಿಗೆ ಸೇರಿಸಲು ಇನ್ನೊಂದೆರಡು ಬಟ್ಟೆಗಳಷ್ಟೇ ಬೇಕಿದ್ದದ್ದು. ಅವಳ ಮಡಿಲ ಬುಡದಲ್ಲಿಯೇ ಇತ್ತು ನೀಲಿ ಬಣ್ಣದ ಫ್ಯಾನ್ಸಿ ಸೀರೆ. ಅದನ್ನು ಎತ್ತಿಕೊಂಡು ಉಳಿದವುಗಳ ಜೊತೆಗೆ ಸೇರಿಸಿ ಹೊಲಿಯಲಾರಂಭಿಸಿದಳು.
ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ “ಕೌದಿ” ನಿಮ್ಮ ಓದಿಗೆ

Read More

ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆ

ಮಹಾನ್‌ ಬುದ್ಧರು ತೀರಿಹೋದ ಮೇಲೂ ಭಿಕ್ಷುಗಳ ಸಂಖ್ಯೆ ಹೆಚ್ಚುತ್ತಲೇ ಇತ್ತು. ಸ್ತೂಪಗಳನ್ನು ವಿಸ್ತರಿಸುವುದಕ್ಕೆ, ಹೊಸದಾಗಿ ನಿರ್ಮಾಣ ಮಾಡುವುದಕ್ಕೆ, ಆಶ್ರಮ, ಉದ್ಯಾನವನಗಳನ್ನು ರೂಪಿಸುವುದಕ್ಕೆ, ವರ್ತಕರಲ್ಲಿ, ಸೇನಾಧಿಪತಿಗಳಲ್ಲಿ, ಚಕ್ರವರ್ತಿಗಳಲ್ಲಿ ಒಂದು ಸ್ಪರ್ಧೆಯೇ ಏರ್ಪಟ್ಟಂತಿತ್ತು. ಇದೆಲ್ಲವನ್ನೂ ನೋಡಿಕೊಳ್ಳುವುದಕ್ಕೆ ಆನಂದನೊಬ್ಬನಿಗೇ ಸಮಯವಿರುತ್ತಿರಲಿಲ್ಲ, ದಣಿವಾಗುತ್ತಿತ್ತು. ಜವಾಬ್ದಾರಿಯನ್ನು ಹಂಚಿಕೊಳ್ಳಲು ನಂಬುಗೆಯ ಜನರು ಸಮೀಪದಲ್ಲಿರಲಿಲ್ಲ.
ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆ ‘ಸಾರಿಪುತ್ರನ ಸಂಸಾರ ಸಾಮ್ರಾಜ್ಯ’

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ