Advertisement

Tag: Ramjan Darga

ಯುದ್ಧದಲ್ಲಿ ಗೆಲ್ಲುವುದು ಸಾವು ಮಾತ್ರ…

ಯುಸಿ಼ಫ್ ತನ್ನ ಹದಿನೈದು ವರ್ಷದ ಮಗ ಆದಮ್‌ನ ಹಿಂದೆ ನಿಂತ. ಅಂಬೆಗಾಲು ಹಾಕುತ್ತ ಜನರ ಕಾಲೊಳಗಿಂದ ಬಾಗಿಲ ಬಳಿ ಹೋಗಲು ಮಗನಿಗೆ ತಿಳಿಸಿದ. ಆದಮ್ ಪ್ರಯತ್ನಪಟ್ಟು ಬಾಗಿಲ ಬಳಿ ಬಂದು ಹೊರಗೆ ನುಸುಳಿ ಓಡತೊಡಗಿದ. ಆದರೆ ನಾಜಿಗಳ ಗುಂಡಿಗೆ ಗುರಿಯಾದ. ಮಗನನ್ನು ಹಿಂಬಾಲಿಸಿದ ಯುಸಿ಼ಫ್ ಮೇಲೂ ಗುಂಡು ಹಾರಿಸಲಾಯಿತು. ನಾಜಿಯೊಂದು ಓಡಿ ಬಂದು ಬಿದ್ದ ಯುಸಿ಼ಫ್‌ನನ್ನು ಬೂಟುಗಾಲಿನಿಂದ ಒದ್ದು, ಬಂದೂಕಿನಿಂದ ತಿವಿಯಲಾಯಿತು. ಖತಿನ್ ಅನುಭವಿಸಿದ ಕೊನೆ ಗಳಿಗೆಯನ್ನು ಮೂರ್ಛಾವಸ್ಥೆಯಲ್ಲಿದ್ದ ಯುಸಿ಼ಫ್ ನೋಡಲಾಗಲಿಲ್ಲ. ನಾಜಿಗಳು ಅಲ್ಲಿಂದ ಹೋದ ನಂತರ ನೆರೆ ಗ್ರಾಮದ ಜನರು ಯುಸಿ಼ಫ್‌ನನ್ನು ಬದುಕಿಸಿದರು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ಸರಣಿ

Read More

ನಿಜಾರ್ಥದಲ್ಲಿ ಯಾರಿಗೂ ಗೆಲುವಿಲ್ಲ ಯುದ್ಧದಲ್ಲಿ…

ಮಾಸ್ಕೋ ಸಮೀಪದ ಬೊರೊದಿನೊ ಎಂಬ ಗ್ರಾಮದಲ್ಲಿ ನೆಪೊಲಿಯನ್ ಬೊನಾಪಾರ್ಟೆ ಸೈನ್ಯದ ವಿರುದ್ಧ ನಡೆದ ಯುದ್ಧದಿಂದ ಆ ಗ್ರಾಮ ಹೇಗೆ ನಾಶವಾಯಿತು ಎಂಬುದನ್ನು ರಷ್ಯನ್ ಪನೋರಮಾದಲ್ಲಿ ಅದ್ಭುತವಾಗಿ ಕಣ್ಣಿಗೆ ಕಟ್ಟುವಂತೆ ಸೃಷ್ಟಿಸಲಾಗಿದೆ. ದಾಳಿಗೊಳಗಾಗಿ ಸಾಯುತ್ತಿರುವ ಸೈನಿಕರು, ಬಿದ್ದು ಒದ್ದಾಡುತ್ತಿರುವ ಯುದ್ಧ ಕುದುರೆಗಳು, ಸುಡುತ್ತಿರುವ ಮನೆಗಳು, ಸುಟ್ಟು ಹೊಗೆಯಾಡುತ್ತಿರುವ ಪ್ರದೇಶಗಳು, ಹಾಹಾಕಾರದ ವಾತಾವರಣ ಹೀಗೆ ಎಲ್ಲವೂ ನಮ್ಮ ಮುಂದೆ ನಡೆಯುತ್ತಿರುವ ಹಾಗೆ ಅನಿಸುತ್ತದೆ. ನೆಪೊಲಿಯನ್ ಬೋನಾಪಾರ್ಟೆ ವಿನಾಶಕಾರಿ ಯುದ್ಧನೃತ್ಯ ಮಾಡುತ್ತಿರುವ ಹಾಗೆ ಅನಿಸುತ್ತದೆ. ರಂಜಾನ್‌ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿ

Read More

ತಾಷ್ಕೆಂಟ್‌ಗೆ ವಿದಾಯ

ಯುದ್ಧದ ಹಿಂಸೆ ಮತ್ತು ಅಸಹಾಯಕತೆಯನ್ನು ಸಹಿಸುತ್ತ, ಸಾವು ನೋವು ಅನುಭವಿಸುತ್ತ ಮುನ್ನಡೆಯುವ ಛಲ ಲೋಕದ ಜನಸಮುದಾಯಗಳಿಗೆ ಅದು ಹೇಗೆ ಬರುವುದೊ! ಬಹುಶಃ ಅನುಭವಿಸಿದಾಗಲೇ ಗೊತ್ತಾಗುವುದು. ಇದೇ ಉಜ್ಬೆಕಿಸ್ತಾನ ಮೂಲದ ಮೊಘಲ ಸಂತತಿಯ ಔರಂಗಜೇಬ್, ನನ್ನ ಜನ್ಮಸ್ಥಳ ವಿಜಯಪುರದ ಮೇಲೆ ದಂಡೆತ್ತಿ ಬಂದು ಆದಿಲಶಾಹಿ ಸಾಮ್ರಾಜ್ಯವನ್ನು ಹಾಳುಗೆಡವಿದ. ಅನೇಕ ಸೂಫಿಸಂತರ ಕೊಲೆ ಮಾಡಿದ. ಯುದ್ಧದಲ್ಲಿ ಯಾರು ಮುಸ್ಲಿಮರು? ಯಾರು ಹಿಂದುಗಳು? ಯಾರು ಕ್ರೈಸ್ತರು? ಯುದ್ಧದಲ್ಲಿ ಧರ್ಮವಿಲ್ಲ, ನೀತಿಯಿಲ್ಲ, ನ್ಯಾಯವಿಲ್ಲ. ಅದು ಕೇವಲ ಯುದ್ಧ. ಗೆದ್ದವರನ್ನೂ ಆರ್ಥಿಕವಾಗಿ ಮತ್ತು ನೈತಿಕವಾಗಿ ಸೋಲಿಸುವ ಯುದ್ಧ.
ರಂಜಾನ್‌ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿಯ 47ನೇ ಕಂತು ಇಲ್ಲಿದೆ.

Read More

ಸಮರಕಂದ್‌ನ ಪಾರಂಪರಿಕ ಸ್ಥಳಗಳು ಮತ್ತು ಬಿಜಾಪುರದ ಗೋಲಗುಮ್ಮಟ

ಸಮರಕಂದ್ ನಗರದ ರೇಗಿಸ್ತಾನ್ ಚೌಕ್ ಅತ್ಯಂತ ಸುಂದರವಾದ ಇಸ್ಲಾಮೀ ಶೈಲಿಯ ವರ್ಣರಂಜಿತ ಇಮಾರತುಗಳಿಂದ ಕೂಡಿದ ಪ್ರದೇಶವಾಗಿದೆ. ತೈಮೂರ ಲಂಗನ ಗೋರಿ ಕೂಡ ಇಲ್ಲೇ ಇದೆ. ಅದು ಎತ್ತರದ ಪ್ರದೇಶದಲ್ಲಿರುವುದರಿಂದ ಬಹಳಷ್ಟು ಮೆಟ್ಟಿಲುಗಳನ್ನು ಹತ್ತಿ ಹೋಗಬೇಕು. ಸುದೈವದಿಂದ ನಮ್ಮ ಗೈಡ್ ಗುಲ್‌ಚೆಹರಾ ಎಂಬ ಯುವತಿ ಸಮರಕಂದ್ ಇತಿಹಾಸವನ್ನು ಬಹಳ ಚನ್ನಾಗಿ ಬಲ್ಲವಳಾಗಿದ್ದಳು. ಆಕೆ ಸಮರಕಂದ್ ಇತಿಹಾಸದ ಮೇಲೆ ಸಂಶೋಧನೆ ಮಾಡಿದವಳಾಗಿದ್ದಳೆಂಬ ನೆನಪು. ಪ್ರತಿಯೊಂದು ಸ್ಥಳದ ಬಗ್ಗೆ ಆಕೆ ವಿವರಿಸುವ ರೀತಿ ನನಗಂತೂ ಬಹಳ ಉಪಯುಕ್ತವಾಯಿತು.
ರಂಜಾನ್‌ ದರ್ಗಾ ಬರೆಯುವ ನೆನಪಾದಾಗಲೆಲ್ಲ ಸರಣಿಯ 45ನೇ ಕಂತು ಇಲ್ಲಿದೆ.

Read More

‘ದುಡಿಯುವ ವರ್ಗಕ್ಕೆ ಒಂದೇ ಲಯ ಇದೆ’

ಈ ಯುದ್ಧದ ಸಂದರ್ಭದಲ್ಲಿ ನಮ್ಮ ಮಧ್ಯೆ ಮಾತಿಗೆ ಮಾತು ಬೆಳೆಯಿತು. ಅವರೆಲ್ಲ ಸೇರಿ ಮುಸ್ಲಿಮರನ್ನು ಹೀಯಾಳಿಸಿದರು. ನಾನು ಅಪಮಾನಿತನಾಗಿ ಎದ್ದು ‘ಬೆಳಿಗ್ಗೆ ಮಿಲಿಟರಿ ಸೇರುವೆ’ ಎಂದು ಹೇಳಿ ಹೊರಗೆ ಬಂದು ಸಿದ್ಧೇಶ್ವರ ಗುಡಿಗೆ ಹೋಗಿ, ಕಟ್ಟೆಯ ಮೇಲೆ ಮಲಗಿದೆ. ಚಳಿಯಿಂದಾಗಿ ರಾತ್ರಿಯಿಡಿ ಸರಿಯಾಗಿ ನಿದ್ದೆ ಬರಲಿಲ್ಲ. ಬೆಳಿಗ್ಗೆ ಎದ್ದು ಸ್ಟೇಷನ್ ರೋಡ್‌ನಲ್ಲಿರುವ ಐಬಿ ಕಡೆಗೆ ಹೊರಟೆ. ಯುದ್ಧದ ಸಂದರ್ಭವಾಗಿದ್ದರಿಂದ 14 ವರ್ಷ ಮೀರಿದ ಬಾಲಕರನ್ನೂ ಅಲ್ಲಿ ಮಿಲಿಟರಿಗೆ ಸೇರಿಸಿಕೊಳ್ಳುತ್ತಿದ್ದರು. ನಾನು ಎಲ್ಲ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣನಾದೆ. ಆದರೆ ತೂಕ ಕಡಿಮೆ ಇತ್ತು. ಅಷ್ಟೊತ್ತಿಗೆ ನನ್ನ ಅಜ್ಜಿ ಮತ್ತು ತಾಯಿ ಬಂದು ಅಳುತ್ತ ನಿಂತಿದ್ದರು.
ರಂಜಾನ್‌ ದರ್ಗಾ ಬರೆಯುವ ನೆನಪಾದಾಗಲೆಲ್ಲ ಸರಣಿಯ 44ನೇ ಕಂತು ಇಲ್ಲಿದೆ.

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ