ಮದುವೆ ಮದುವೆ ಆ ಸಿಹಿ ಪದವೆ: ಅಚಲ ಸೇತು ಬರಹ
ಅಡುಗೆಮನೆಯ ಸಿಹಿತಿಂಡಿಯ ಡಬ್ಬಕ್ಕೆ ಮುತ್ತಿಗೆ ಹಾಕುವ ಇರುವೆಗಳ ಹಾಗೆ ಮದುವೆಯಾಗಬಯಸುವ ಸಾಲು ಸಾಲು ಮದುಮಕ್ಕಳ ಸಂತೆ ನೆರೆಯಿತು. ರಾತ್ರಿ ಹನ್ನೆರಡು ಗಂಟೆಯೊಳಗೆ ತಮಗೆ ಮದುವೆ ಪರವಾನಗಿ ದೊರಕಬೇಕು ಎಂದು ಕೂಗುತ್ತ ಒಳ ನುಗ್ಗಲು ತಳ್ಳಾಡುತ್ತಿದ್ದ ವಧುವರರ ವರ್ತನೆ ವಿಚಿತ್ರವಾಗಿತ್ತು.
ಲಾಸ್ ವೇಗಸ್ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
ಜೊತೆಗಿರುವನು ಚಂದಿರ….: ಮೀನಾ ಮೈಸೂರು ಬರಹ
ಹೊಟ್ಟೆ ತುಂಬುವಷ್ಟು ಅನ್ನ ಸಿಕ್ಕರದೆ ಐಭೋಗವೆಂದು ನಂಬಿದ್ದ ತಾಯಿ, ತನ್ನ ಮಗಳಿಗೆ ತನ್ನ ಗಂಡನಿಗಿಂತಲೂ ವಯಸ್ಸಾದ ಆ ಗ್ರಾಮದಲ್ಲೇ ಸಿರಿವಂತನೆನಿಸಿದ್ದ ಕಲಾಯಿ ವೃತ್ತಿ ಮಾಡುವ ಮುದುಕನಿಗೆ ಮಗಳನ್ನು ಮದುವೆ ಮಾಡಲು ಒಪ್ಪಿಕೊಳ್ಳುವಂತಹ ದೈನೇಸಿ ಸ್ಥಿತಿ. ಆದರೆ ಆ ಮಗಳು ನೆರೆಮನೆಯ ಅದೇ ಜನಾಂಗದ ಹುಡುಗನನ್ನು ಪ್ರೀತಿಸುವುದು ತಂದೆಗೆ ಗೊತ್ತಾಗುತ್ತದೆ.
“ಜೊತೆಗಿರುವನು ಚಂದಿರ” ನಾಟಕದ ಕುರಿತು ಮೀನಾ ಮೈಸೂರು ಬರಹ
ವರ್ಷ ಸಂಧ್ಯಾಕಾಲೇ ಚಹಾ ಸೇವನಂ ಸ್ವರ್ಗಾರೋಹಣ ಸಮಾನಂ: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರಹ
ಆಗತಾನೇ ನಾನು ಬರೆದಿದ್ದ ‘ಮ್ಯಾಚು’ ಎನ್ನುವ ಕಥೆಯನ್ನು ಅದೊಂದು ಸಂಜೆ ಚಹಾ ಕುಡಿಯುತ್ತಿದ್ದಾಗ ಅವನಿಗೆ ಓದಲು ಕೊಟ್ಟಿದ್ದೆ. ಎರಡು ದಿನ ಬಿಟ್ಟು ಅದನ್ನು ಓದಿ ಬಂದವನು ವಿಪರೀತ ಮೆಚ್ಚುಗೆಯಾಗಿದ್ದಾಗಿ ಹೇಳಿ, ಕಣ್ಣೀರು ಸುರಿಸಿದ್ದ. ಆ ಕಥೆಯಲ್ಲಿ ಭಿನ್ನ ಧರ್ಮಕ್ಕೆ ಸೇರಿದವರ ಗೆಳೆತನದ ಬಗೆಗಿನ ಚಿತ್ರಣವಿತ್ತು.
ಚಹಾದ ಕುರಿತು ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರಹ
ಭೂಗತ ದೊರೆಗಳು ಬೆಳೆಸಿದ ಲಾಸ್ ವೇಗಸ್: ಅಚಲ ಸೇತು ಬರಹ
ಕ್ಯಾಲಿಫೋರ್ನಿಯಾದಲ್ಲಿ ಮಾದಕ ಪದಾರ್ಥಗಳ ಕಳ್ಳ ಸಾಗಾಣಿಕೆ, ಸುಪಾರಿ ಕೊಲೆ, ಸುಲಿಗೆಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಾ ಮೇಲಿನವರ ಪ್ರಶಂಸೆಗೆ ಪಾತ್ರನಾದ. ಹಾಲಿವುಡ್ ತಾರೆಯರ ತೋಳಿನಲ್ಲಿ ತೋಳು ಬೆರೆಸಿ ಓಡಾಡಿದ. ಅಷ್ಟೊತ್ತಿಗಾಗಲೇ ನೆವಾಡಾ ತನ್ನ ರಾಜ್ಯಾದಾಯ ಹೆಚ್ಚಿಸಿಕೊಳ್ಳುವ ಸಲುವಾಗಿ ಜೂಜು ಅಡ್ಡೆಗಳನ್ನು ಸಂವಿಧಾನಾತ್ಮಕವಾಗಿ ಅಂಗೀಕರಿಸಿತ್ತು.
ಅಮೆರಿಕಾದ ಲಾಸ್ ವೇಗಸ್ ನಗರದ ಇತಿಹಾಸದ ಕುರಿತು ಅಚಲ ಸೇತು ಬರಹ ನಿಮ್ಮ ಓದಿಗೆ
ಸಂಶೋಧನೆ, ಸಾಹಿತ್ಯ ಜಗತ್ತು ಮತ್ತು ನಾನು: ಡಾ| ವಿಶ್ವನಾಥ ಎನ್ ನೇರಳಕಟ್ಟೆ
ಸಂಶೋಧನೆಯಲ್ಲಿ ತೊಡಗಿಸಿಕೊಂಡ ನಾನೀಗ ಎಲ್ಲವನ್ನೂ ಪ್ರಶ್ನಿಸುವ, ಕುತೂಹಲದಿಂದ ನೋಡುವ ಶಿಶುವಾಗಿ ಬದಲಾಗಿದ್ದೆ. ಪ್ರಾಯೋಗಿಕ ದೃಷ್ಟಿ ನನ್ನಲ್ಲಿ ಮೊಳಕೆಯೊಡೆಯಲಾರಂಭಿಸಿತ್ತು. ವೈಚಾರಿಕ ಪ್ರಜ್ಞೆ ಜಾಗೃತವಾಗಿತ್ತು. ಈ ಬಗೆಯ ಮನೋಧರ್ಮ ಸಂಶೋಧನಾ ಪ್ರಕ್ರಿಯೆಯ ನೆಲೆಯಲ್ಲಿ ಪ್ರಯೋಜನಕಾರಿಯಾಗಿತ್ತು. ಆದರೆ ಅನುದಿನದ ಬದುಕಿನಲ್ಲಿಯೂ ಇದು ಅನುರಣನವಾಗತೊಡಗಿದಾಗ ಒಂದಷ್ಟು ತೊಂದರೆ ಎದುರಾದದ್ದಂತೂ ಸತ್ಯ.
ಡಾ| ವಿಶ್ವನಾಥ ಎನ್ ನೇರಳಕಟ್ಟೆ ಬರಹ ನಿಮ್ಮ ಓದಿಗೆ
ಸ್ಯಾನಿಟರಿ ಇಂಜಿನಿಯರ್ಸ್..: ಪೂರ್ಣೇಶ್ ಮತ್ತಾವರ ಪ್ರಬಂಧ
ಹೀಗೆ ನೀರು ಹೊತ್ತುಕೊಂಡು ಹೋದರೂ ಯಾವಾಗಲೂ ಉದ್ದನೆಯ ಸಾಲು, ನೂಕು ನುಗ್ಗಲು! ಸರಿ, ಈ ಎಲ್ಲಾ ಕಿರಿಕಿರಿ, ಪಡಿಪಾಟಲುಗಳನ್ನು ಅನುಭವಿಸುತ್ತಲೇ ಹತ್ತಾರು ನಿಮಿಷ ಕಾದು ಒಳ ಹೋದರೂ, ಹೋದವರು ಬಾಗಿಲು ಹಾಕಿ, ಬಾಗಿಲಿನ ಚಿಲಕ ಸರಿ ಇಲ್ಲವೆಂದು ಬಕೆಟನ್ನೇ ಬಾಗಿಲಿಗೆ ಅಡ್ಡವಾಗಿ ಇಟ್ಟು, ಕುಕ್ಕರುಗಾಲು ಹಾಕಿ ಕೂತು ಒಂದು ಕೈಲಿ ಬಕೆಟ್, ಮತ್ತೊಂದು ಕೈಲಿ ಸಹಿಸಲಾರದ ವಾಸನೆಗೆ ಮೂಗು ಮುಚ್ಚಿ ಶೌಚ ನಡೆಸಬೇಕೆನ್ನುವಷ್ಟರಲ್ಲೇ ದಡಬಡ ಬಾಗಿಲು ಬಡಿತ, ಸ್ವಲ್ಪ ತಡವಾದರೂ ಬಾಗಿಲನ್ನೇ ಮುರಿಯುವ ಬೆದರಿಕೆ, ಇತ್ಯಾದಿ, ಇತ್ಯಾದಿ..
ಪೂರ್ಣೇಶ್ ಮತ್ತಾವರ ಬರೆದ ಪ್ರಬಂಧ ನಿಮ್ಮ ಓದಿಗೆ
ಒಡಹುಟ್ಟಿದವನ ಒಡಲಾಳದ ನೋವು!: ಶರಣಗೌಡ ಪಾಟೀಲ ತಿಳಗೂಳ ಪ್ರಬಂಧ
ಬಸ್ ಡಾಂಬರ್ ರಸ್ತೆ ಸೀಳಿಕೊಂಡು ಅರ್ಧ ದಾರಿ ಕ್ರಮಿಸಿತು. ಇದ್ದಕ್ಕಿದ್ದಂತೆ ಬಸ್ಸಿನಲ್ಲಿ ಜೋರಾಗಿ ಅಳುವ ಧನಿಯೊಂದು ಕೇಳಿ ಬಂದಿತು. ಎಲ್ಲರೂ ಗಾಬರಿಯಾಗಿ ಅತ್ತಕಡೆ ಗಮನ ಹರಿಸಿದರು. ನಾಗಚಂದ್ರನೂ ಆ ಕಡೆ ಹೊರಳಿ ನೋಡಿದ. ಇವನಿಗೆ ಆಶ್ಚರ್ಯದ ಜೊತೆಗೆ ಗಾಬರಿಯೂ ಆಯಿತು. ಅಳುವ ವ್ಯಕ್ತಿ ಸಾಮಾನ್ಯನಂತೆ ಕಾಣಿಸುತ್ತಿರಲಿಲ್ಲ. ಆತ ಬಟ್ಟೆ ಶಿಸ್ತಿನ ವ್ಯಕ್ತಿಯಾಗಿದ್ದ.
ಶರಣಗೌಡ ಬಿ. ಪಾಟೀಲ ತಿಳಗೂಳ ಪ್ರಬಂಧ ನಿಮ್ಮ ಓದಿಗೆ
ಸಂಜೆಗಣ್ಣಿನ ಚೆಲುವು : ಎಲ್.ಜಿ.ಮೀರಾ ಲಲಿತ ಪ್ರಬಂಧ
ಮೂರು ವರ್ಷ ಮುಗಿಯುತ್ತಿದ್ದಂತೆ ಮಂತ್ರಿಗಳು ಅವನ ಬಳಿ ಬಂದು “ನಾಳೆ ನಿಮ್ಮನ್ನು ಕಾಡಿಗೆ ಒಯ್ದು ಬಿಡುತ್ತೇವೆ, ತಯಾರಾಗಿರಿ” ಎಂದಾಗ ಅವನು ಸ್ವಲ್ಪವೂ ವಿಚಲಿತನಾಗದೆ ಒಪ್ಪಿಕೊಳ್ಳುತ್ತಾನೆ. ಮಾರನೆಯ ದಿನ ಅವನಿಗೆ ಇಷ್ಟವಾದ ಊಟತಿಂಡಿಗಳನ್ನು ಕೊಟ್ಟು ಊರಿನ ಪಕ್ಕದಲ್ಲಿದ್ದ ನದಿಯನ್ನು ದೋಣಿಯಲ್ಲಿ ದಾಟಿಸಿ ಅವನನ್ನು ಕಾಡಿಗೆ ಬಿಡಲು ಹೋದವರಿಗೆ ಒಂದು ಅಚ್ಚರಿ ಕಾದಿರುತ್ತದೆ. ಕೆಲವೇ ವರ್ಷಗಳ ಹಿಂದೆ ಗೊಂಡಾರಣ್ಯವಾಗಿದ್ದದ್ದು ಈಗ ನಾಡಾಗಿರುತ್ತದೆ!
ವೃದ್ಧಾಪ್ಯದ ದಿನಗಳ ಕುರಿತು ಡಾ. ಎಲ್.ಜಿ. ಮೀರಾ ಲಲಿತ ಪ್ರಬಂಧ
ಬೆಕ್ಕಾಯಣ…. ರಾಮಾಯಣ…: ವೇದ ಭದ್ರಾವತಿ ಬರಹ
ಹುಡುಗ ಎಲ್ಲ ಕಿಟಕಿಗಳನ್ನು ಮುಚ್ಚಿ ಬಾಗಿಲು ಹಾಕಿ ಒಮ್ಮೆ ನನ್ನ ಮುಖ ನೋಡಿ ಮೆಲ್ಲಗೆ, ಎರಡೂ ಮರಿಗಳು ಸತ್ತು ಹೋಗಿರುವುದನ್ನೂ ಗಂಡು ಬೆಕ್ಕು ಒಂದನ್ನು ಅರ್ಧ ತಿಂದಿರುವುದನ್ನೂ ಹೇಳಿದ. ನನಗೆ ಜಂಘಾಬಲ ಉಡುಗಿತು! ಮರಿಗಳಿಗಾಗಿ ಹೆಣ್ಣು ಉಗ್ರವಾಗಿ ಕಾದಾಡಿದ್ದು ಸ್ಪಷ್ಟವಾಗಿತ್ತು. ತನ್ನ ಮರಿಗಳಲ್ಲಿ ಯಾವುದೂ ಉಳಿದಿಲ್ಲವೆಂದು ಅದಕ್ಕೆ ತಿಳಿಸುವುದು ಹೇಗೆ?? ಇಷ್ಟು ದಿನ ನಮ್ಮನ್ನು ಕಂಡೊಡನೆ ಮಾರು ದೂರ ಓಡುತ್ತಿದ್ದ ತಾಯಿ ಈಗ ಮುಚ್ಚಿದ್ದ ಕಿಟಕಿಯನ್ನು ಹೊಗುವ ವಿಧಾನ ಹುಡುಕುತ್ತ, ತನ್ನ ಮರಿಗಳು ಅಲ್ಲಿವೆ ಎಂದೂ ನಾವು ಕಿಟಕಿ ತೆರೆದು ದಾರಿ ಕೊಡಬೇಕೆಂದೂ ದಯನೀಯ ಸ್ವರದಲ್ಲಿ ಅಂಗಲಾಚುತ್ತ ನಮ್ಮನ್ನೇ ದಿಟ್ಟಿಸತೊಡಗಿತ್ತು.
ಬೆಕ್ಕುಗಳ ಕುರಿತು ವೇದ ಭದ್ರಾವತಿ ಬರಹ ನಿಮ್ಮ ಓದಿಗೆ