Advertisement

Month: January 2025

ಹಾಡಬೇಕು ನಾವೀಗ ಗೆಳತಿಯರೇ ಸ್ತ್ರೀಸಖ್ಯಗೀತೆಯ..: ಎಲ್.ಜಿ.ಮೀರಾ ಅಂಕಣ

ಹೆಂಗಸರು ಇದೇ ರೀತಿ ತಮ್ಮ ಸಂಜೆಗಳನ್ನು ಕಳೆಯಲು ಸಾಧ್ಯವೇ? ಅಡಿಗೆಮನೆಯ ಜವಾಬ್ದಾರಿ, ಮಕ್ಕಳ ದೇಖರೇಖಿ, ನೆಂಟರಿಷ್ಟರ ಉಪಚಾರ ಮುಂತಾದವುಗಳು ಹೆಣ್ಣಿನ ಸಂಜೆ, ಇಳಿಸಂಜೆಗಳನ್ನು ಕಬಳಿಸುವುದು ವಾಸ್ತವ ಸಂಗತಿ. ಸಂಜೆ ಗಂಡು ಮಾಡುವ `ಚಿಲ್ಲಿಂಗ್’ ಚಟುವಟಿಕೆಗಳನ್ನು ಹೆಣ್ಣು ಮಾಡಿದರೆ ಅವಳನ್ನು ಬೀದಿ ಬಸವಿ, ಬೇಜವಾಬ್ದಾರಿ ಹೆಣ್ಣು, ಚೆಂಗ್ಲು ಹೊಡೆಯುವವಳು ಎಂದೆಲ್ಲ ಅಂದು ಆಡಿ ಕೆಟ್ಟ ಹಣೆಪಟ್ಟಿಗಳನ್ನು ಹಚ್ಚಲಾಗುತ್ತದೆ. ಸನ್ನಿವೇಶ ಹೀಗಿರುವಾಗ, ಹೆಣ್ಣುಗಳು ಸಾಯಂಕಾಲಗಳಲ್ಲಿ ಮನೆಯಿಂದ ಹೊರಗೇ ಬರದಿರುವಾಗ ಅವರ ನಡುವೆ ಸ್ನೇಹ ಸಂಬಂಧಗಳು ಮೂಡುವುದು ಹೇಗೆ?
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

ಜೈಲು ಕಟ್ಟಿಸಿ ಬಂಧಿಗಳಾಗಿದ್ದು!: ಪೂರ್ಣೇಶ್‌ ಮತ್ತಾವರ ಸರಣಿ

ಅತ್ತ ನೋಡಿದರೆ ಅದೆಲ್ಲಿ ನಮ್ಮ ಹೆಸರುಗಳು, ಮಾರ್ಕ್ಸ್‌ಗಳು ತಾರೆ ಜಮೀನ್ ಪರ್ ಸಿನಿಮಾದಲ್ಲಿ ಶಿಕ್ಷಕಿ ಸರ್ಪ್ರೈಸ್ ಮ್ಯಾತ್ಸ್ ಟೆಸ್ಟ್ ಕೊಟ್ಟಾಗ, ಶಿಕ್ಷಕರು ನೌನ್, ಪ್ರನೌನ್ ಎಂದಾಗ ಅಂಕಿ ಸಂಖ್ಯೆಗಳು, ಅಕ್ಷರಗಳೆಲ್ಲಾ ಹುಡುಗನೆದುರು ಜೀವ ತಳೆದು ಕುಣಿದಾಡುತ್ತವಲ್ಲ.. ಹಾಗೆಯೇ ನಮ್ಮ ಮುಂದೆ ಜೀವ ತಳೆದು “ಕಾಪಾಡಿ ಕಾಪಾಡಿ ನಮ್ಮನ್ನು ಬಿಟ್ಟು ಹೋಗಬೇಡಿ” ಎಂದು ಕಿರುಚಿಕೊಳ್ಳುತ್ತೇವೆಯೋ, “ಕನಿಷ್ಠ ಪಕ್ಷ ಕೆಲ ಗಣ್ಯ ಅಪರಾಧಿಗಳಂತೆ ಮುಖ ಮುಚ್ಚಿಕೊಳ್ಳಲು ಮಾಸ್ಕ್, ಕರ್ಚೀಪ್‌ಗಳನ್ನಾದರೂ ಕೊಟ್ಟು ಹೋಗಿ” ಎಂದು ಕೇಳುತ್ತೇವೆಯೋ ಎನಿಸಲಾರಂಭಿಸಿತ್ತು.
ಪೂರ್ಣೇಶ್‌ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿ

Read More

ವರ್ತಮಾನದ ಬೆಂಕಿಯಲ್ಲಿ ಅರಳಿದ ಹೂವು ಮೈ ಫ್ಯಾಮಿಲಿ: ಎಚ್. ಆರ್. ರಮೇಶ ಬರಹ

ಈ ನಾಟಕದ ಮತ್ತೊಂದು ವೈಶಿಷ್ಟ್ಯತೆಯೆಂದರೆ, ಇಂದಿನ ತಂತ್ರಜ್ಞಾನ ಮತ್ತು ಅದರ ಪರಿಣಾಮದ ಸೋ ಕಾಲ್ಡ್ ಆನ್ ಲೈನ್ ಸಾಮಾಜಿಕ ಜಾಲ ತಾಣಗಳು ಮನುಷ್ಯ ಸಂಬಂಧಗಳನ್ನು ಸಡಿಲಗೊಳಿಸುತ್ತ, ಒಂಟಿತನಗಳನ್ನು ಹುಟ್ಟುಹಾಕುತ್ತ ಮನುಷ್ಯರನ್ನು ಭಾವನಾರಹಿತರನ್ನಾಗಿಸುತ್ತಿರುವುದನ್ನು, ಇಡೀ ಮನುಕುಲವೇ ಅನುಭವಿಸುತ್ತಿರುವುದನ್ನು, ಭಾರತೀಯ ಸಂದರ್ಭದಲ್ಲಿ ಇಟ್ಟು ನೋಡಿರುವುದು. ಇದಕ್ಕೆ ಪುರಾಣ, ಇತಿಹಾಸ, ಮತ್ತು ಜ್ವಲಂತ ಸಂಗತಿಗಳು ರೂಪಕವಾಗಿ ಮೈದಾಳಿ ಬಂದಿವೆ.
ಕುಮಾರಿ ಗೌತಮಿ ಕತೆಯಾಧಾರಿತ ಮೈಸೂರಿನ ರಂಗಾಯಣದ ರೆಪರ್ಟರಿ ಕಲಾವಿದರು ಅಭಿನಯಿಸಿದ “ಮೈ ಫ್ಯಾಮಿಲಿ” ನಾಟಕದ ಕುರಿತು ಎಚ್.ಆರ್.‌ ರಮೇಶ್‌ ಬರಹ

Read More

ಆ ಹೊಳೆವ ಕಂಗಳು…: ಸುಧಾ ಆಡುಕಳ ಅಂಕಣ

ಅದೇನು ಜಾದೂ ನಡೆಯಿತೋ ತಿಳಿಯದು, ಅಲ್ಲಿಂದ ತಿರುಗಿ ಬಂದ ಮಂಜಿಯ ಅಪ್ಪ ಗಡುಸಾಗಿ ಮಾತನಾಡತೊಡಗಿದ, “ಮಗಳು ನಂದು, ಏನು ಮಾಡಬೇಕಂತ ನಂಗೊತ್ತದೆ. ನೀವು ಇನ್ನೂ ಮೀಸೆ ಸರಿಯಾಗಿ ಬರದಿರೋರೆಲ್ಲ ಕಾನೂನು ಮಾತಾಡೂದು ಬ್ಯಾಡ. ಅವಳ ದೇಹ ಬಿಡುಗಡೆಗೆ ಕಾಯ್ತದೆ. ನಮ್ಮ ಕುಟುಂಬದ ದೆಯ್ಯಗಳು ಅವಳನ್ನು ಕಳಿಸಿಕೊಡು ಅಂತ ಕೂಗ್ತಿವೆ. ನೀವು ಪೋಲೀಸು, ಕಾನೂನು ಅಂತ ವರಾತ ಸುರುಮಾಡಿ ಅವಳ ದೇಹ ಕೊಳೆಯೂ ಹಾಗೆ ಮಾಡಬೇಡಿ.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಇಪ್ಪತ್ನಾಲ್ಕನೆಯ ಕಂತು ನಿಮ್ಮ ಓದಿಗೆ

Read More

ದುಬೈನ ಬುರ್ಜ್ ಖಲೀಫಾ ಎಂಬ ಸ್ಕೈಸ್ಕ್ರಾಪರ್: ಡಾ. ಎಂ. ವೆಂಕಟಸ್ವಾಮಿ ಬರಹ

ವಾಸ್ತುಶಿಲ್ಪ ಮತ್ತು ಎಂಜಿನಿಯರಿಂಗ್ ಪ್ರಕ್ರಿಯೆಯ ಒಂದು ನಿರ್ದಿಷ್ಟ ಹಂತದಲ್ಲಿ, ಮೂಲ ಎಮಾರ್ ಡೆವಲಪರ್‌ಗಳಿಗೆ ಹಣಕಾಸಿನ ಸಮಸ್ಯೆ ಎದುರಾಗಿ ಹೆಚ್ಚಿನ ಹಣದ ಅಗತ್ಯಬಿದ್ದಾಗ ಆಗಿನ ಯುಎಇ’ಯ ಆಡಳಿತಗಾರ ಶೇಖ್ ಖಲೀಫಾ ಅವರು ಹಣದ ನೆರವು ನೀಡಿದರು. ಆದ್ದರಿಂದ ಕಟ್ಟಡದ ಮೊದಲ `ಬುರ್ಜ್ ದುಬೈ’ ಹೆಸರನ್ನು `ಬುರ್ಜ್ ಖಲೀಫಾ’ ಎಂದು ಬದಲಾಯಿಸಲಾಯಿತು.
ದುಬೈ ಪ್ರವಾಸದ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ