Advertisement

Month: January 2025

ಹುಚ್ಚಾಟಗ್ಳು: ಸುಮಾ ಸತೀಶ್ ಸರಣಿ

ಸ್ಯಾನೆ ಟೇಮಿದ್ರೆ ಉಂಗುರ ಸೆಂದಾಗಿ ಮಾಡ್ತಿದ್ವಿ. ವೈನಾಗಿ ಜಡೆ ಹೆಣ್ದು ಅದುನ್ನ ಬೆಳ್ಳಿನ್ ಗಾತ್ರುಕ್ಕೆ ಸರ್ಯಾಗಿ ಬಗ್ಗಿಸಿ, ಸುತ್ತಿ‌ ಬಾಲ ಇಲ್ದಂಗೆ ಮಾಡೀವಿ. ಆತ್ರ ಇದ್ರೆ ತಿಥಿ ಮಾಡ್ಸಾ ಐನೋರು ದರ್ಬೇನಾಗೆ (ಒಣಗಿದ್ ಹುಲ್ಲು) ಸುಮ್ಕೆ ಒಂದು ಗಂಟು ಆಕಿ, ಬೆಟ್ಟಷ್ಟು ಉದ್ದೂಕೆ ನಿಟಾರ್ ಅಂತ ನಿಂತಿರಾ ಹುಲ್ಲು ಕೊಟ್ಟು ಉಂಗ್ರ ಆಕ್ಕಳಿ ಅಂಬಲ್ವೇ ಅಂಗೇ ನಾವೂ ಸುಮ್ಕೆ ಒಂದು ಗಂಟು ಹಾಕಿ, ಉದ್ದೂಕೆ ಗರಿ ಅಂಗೇ ಬುಟ್ಟು, ಕೈಯಾಗೆ ಏರ್ಸಿ ಓಡ್ತಿದ್ವಿ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ

Read More

ಪರೀಕ್ಷೆ ತಪ್ಪಿಸಿಕೊಳ್ಳಲು ಮಾಡಿದ ಐಡಿಯಾ!!!: ಬಸವನಗೌಡ ಹೆಬ್ಬಳಗೆರೆ ಸರಣಿ

ನನಗೆ ಹಲವಾರು ಬಾರಿ ನಮ್ಮನೆ ಕಂಡೀಶನ್‌ಗೆ ಚೆನ್ನಾಗಿ ಓದಬೇಕು ಆದರೆ ಈ ರೀತಿ ಯಾಕೆ ಮಾಡ್ತಾ ಇದೀನಿ ಅನಿಸೋದು. ಆದರೆ ನಾನು, ಲಿಂಗರಾಜ, ಸುಧಾಕರ ಅಕ್ಟೋಬರ್ ವೇಳೆಗಾಗಲೇ ಈ ವರ್ಷ ರಿಜೆಕ್ಟ್ ಮಾಡಬೇಕು ಅಂತಾ ತೀರ್ಮಾನ ಮಾಡಿದ್ವಿ. ನಾನೂ ಈ ತೀರ್ಮಾನಕ್ಕೆ ಬರೋದಿಕ್ಕೂ ಒಂದು ಕಾರಣ ಇತ್ತು. ನಾನು ಮೊದಲ ಪಿಯೂಸಿಯಿಂದ ದ್ವಿತೀಯ ಪಿಯೂಸಿಗೆ ಕಾಲೇಜ್ ಬದಲಾಯಿಸಬೇಕು ಅಂತಾ ಹೋದಾಗ 2 ರಿಂದ 3 ತಿಂಗಳು ಬೋರ್ಡ್‌ಗೆ ಓಡಾಟದ ಮೂಲಕ ಸಮಯ ವ್ಯರ್ಥವಾಗಿ ಹೋಗಿತ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ಕಾಮ್ರೇಡ್ ಹೆಚ್.ಕೆ. ರಾಮಚಂದ್ರಪ್ಪ ಸ್ಮರಣೆ: ರಂಜಾನ್ ದರ್ಗಾ ಸರಣಿ

ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಬಹಳ ಬದಲಾವಣೆಗಳಾಗಿವೆ. ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ಸುಲಿಗೆ ಯೋಜನೆ ಮೂಲಕ ಇಡೀ ಜಗತ್ತಿನ ಕಾರ್ಮಿಕರ ಆರ್ಥಿಕ ಸ್ಥಿತಿ ಕುಸಿಯಿತು. ಈ ಎಲ್ಲ ಕಾರಣಗಳಿಂದಾಗಿ ದಾವಣಗೆರೆಯ ಸಂಗಾತಿಗಳ ಸಾಧನೆ ಗತವೈಭವದಂತೆ ಕಾಣತೊಡಗಿತು. ಅಂಥ ಸಂದರ್ಭದಲ್ಲಿ ಕೂಡ ಹೆಚ್.ಕೆ. ರಾಮಚಂದ್ರಪ್ಪ ಅವರು ಎದೆಗುಂದಲಿಲ್ಲ. ಬದುಕಿನ ಕೊನೆಯ ಉಸಿರು ಇರುವವರೆಗೂ ಅವರು ನಗುಮುಖದಿಂದ ಕಾರ್ಮಿಕರ ಒಳಿತಿಗಾಗಿ ದುಡಿದದ್ದು ಇಂದು ಇತಿಹಾಸವಾಗಿದೆ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 92ನೇ ಕಂತು ನಿಮ್ಮ ಓದಿಗೆ

Read More

ಡಾ. ದಿಲೀಪ್‌ ಕುಮಾರ್‌ ಎನ್.ಕೆ. ಬರೆದ ಈ ಭಾನುವಾರದ ಕತೆ

ಗುಂಡನಿಗೆ ನಿದ್ರೆಯೇ ಬರುತ್ತಿಲ್ಲ. ಆತ ಏನೇನೋ ಯೋಚಿಸುತ್ತಾ ಎಚ್ಚರವಾಗೇ ಇದ್ದಾನೆ. ನಿದ್ದೆ ತಾನೇ ಅವನಿಗೆ ಎಲ್ಲಿಂದ ಬರಬೇಕು? ಅವನ ಮನಸ್ಸಿನ ತುಂಬೆಲ್ಲಾ ಅವನ ಅಪ್ಪ ಅಮ್ಮರೇ ತುಂಬಿಹೋಗಿದ್ದಾರೆ. ಅವನಿಗೆ ಏನನ್ನಿಸಿತೋ ಏನೋ? ಮೆಲ್ಲಗೆ ಎದ್ದು ಮಲಗಿದ್ದ ಅಪ್ಪನನ್ನೇ ಕಣ್ತುಂಬಿಕೊಳ್ಳುತ್ತಾ ಅಪ್ಪನ ಮಟ್ಟಗುಂಜಿನಂತಿದ್ದ ತಲೆಗೂದಲ ಮೇಲೆ ಕೈಯಾಡಿಸುತ್ತಾನೆ. ಅವನ ಚಕ್ಕಳವಾದ ದೇಹ. ಅವನ ನೋವಿನ ಕಾಲು. ಇತ್ತ ತನ್ನ ಮಗ್ಗುಲಲ್ಲೇ ಮಲಗಿದ್ದ ಅವ್ವನನ್ನು ನೋಡುತ್ತಾನೆ.
ಡಾ. ದಿಲೀಪ್‌ ಕುಮಾರ್‌ ಎನ್.ಕೆ. ಬರೆದ ಈ ಭಾನುವಾರದ ಕತೆ “ಸುಟ್ಟಿರದೇ ಮೂರ್ ದ್ವಾಸ…” ನಿಮ್ಮ ಓದಿಗೆ

Read More

ಕೀವೀ-ಕಾಂಗರೂ ದೇಶಸ್ಥರ ನೆಂಟಸ್ತನ: ವಿನತೆ ಶರ್ಮ ಅಂಕಣ

“ಈ ನಾಯಕರ ನಿಲುವು ಏನೆಂದರೆ ತಾವು ಆಸ್ಟ್ರೇಲಿಯಾವನ್ನು ಒಂದು ಆಧುನಿಕ ದೇಶವನ್ನಾಗಿ ಮಾತ್ರ ನೋಡುವುದು. ವಸಾಹತು ಚರಿತ್ರೆಯನ್ನು ಸಮರ್ಥಿಸುವುದಿಲ್ಲ ಮತ್ತು ಬಿಳಿಯರು ಬಂದು ಅಭಿವೃದ್ಧಿಪಡಿಸಿದ್ದರಿಂದ ನಾವು ಈ ಅದೃಷ್ಟದ ನಾಡಿನಲ್ಲಿದ್ದೀವಿ. ಮೂಲಜರಾದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೈಟ್ ದ್ವೀಪವಾಸಿಗಳು ಈ ಆಧುನಿಕ ಆಸ್ಟ್ರೇಲಿಯಾದಲ್ಲಿ ಅದಕ್ಕೆ ಹೊಂದಿಕೊಂಡು ಇರಬೇಕು, ತಮಗೆ ಪ್ರತ್ಯೇಕ ಅಸ್ಮಿತೆ ಬೇಕು ಎಂದು ಕೇಳಬಾರದು. ತನ್ನ ಪಕ್ಷ ಅಧಿಕಾರಕ್ಕೆ ಬಂದರೆ ಈ ರೆಫೆರೆಂಡಮ್ ಮುಂತಾದ ಬೇಡಿಕೆಗಳಿಗೆ ಆಸ್ಪದ ಕೊಡುವುದಿಲ್ಲ, ಎಂದಿದ್ದಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ